ಸುದ್ದಿ ಸ್ಟುಡಿಯೋದಲ್ಲಿ ಬಿಲ್ ಕಲೆಕ್ಟರ್, ಅಂಚೆ ವಿತರಕರು, ಪ್ರತಿನಿಧಿಗಳ ಸಭೆ

0

ತಾಲೂಕಿನ ಅಂಚೆ ವಿತರಕರ, ಪಿಗ್ಮಿ ಸಂಗ್ರಹಕಾರರ, ಪಂಚಾಯತ್‌ ಬಿಲ್ ಕಲೆಕ್ಟರ್ ಗಳ ಹಾಗೂ ಪ್ರತಿನಿಧಿಗಳ ಸಭೆ ಇಂದು‌ ಸುದ್ದಿ ಸ್ಟುಡಿಯೋದಲ್ಲಿ ನಡೆಯಿತು.

ಸುದ್ದಿ ಸಮೂಹ ಸಂಸ್ಥೆಗಳ‌ ಮಾಲಕ ಡಾ.ಯು.ಪಿ.ಶಿವಾನಂದರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಸುದ್ದಿ ಬಿಡುಗಡೆ ವಾರಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಸುದ್ದಿ ಚಾನೆಲ್ ಮುಖ್ಯಸ್ಥರಾದ ದುರ್ಗಾಕುಮಾರ್ ನಾಯರ್ ಕೆರೆ ಸುದ್ದಿಯ ಯೋಜನೆ‌ ಮತ್ತು ಯೋಚನೆಗಳ ಬಗ್ಗೆ ಮಾಹಿತಿ‌ ನೀಡಿದರು. ಕೃಷಿ ವಿಭಾಗದ ಮುಖ್ಯಸ್ಥೆ ರಮ್ಯ ಕಳಂಜ ಕೃಷಿ‌ ವಿಭಾಗದ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮಡಪ್ಪಾಡಿಯ ಸುದ್ದಿ ಪ್ರತಿನಿಧಿ, ಗೋಪಾಲಕೃಷ್ಣ ಪಾರೆಪ್ಪಾಡಿ, ಉಬರಡ್ಕ ಗ್ರಾಮದ ಪ್ರತಿನಿಧಿ‌ ಆನಂದ ಪಿ.ಎಸ್., ನೆಲ್ಲೂರು ಕೆಮ್ರಾಜೆಯ ಕೇಶವ ಬಾಳೆಗುಂಡಿ, ಅಜ್ಜಾವರ ಲೋಕೇಶ್ ಪಿ.ಆರ್., ಚೆಂಬು ಗ್ರಾಮದ ಪ್ರತಿನಿಧಿ ರಮೇಶ್ ನಂಬಿಯಾರ್, ಸಂಪಾಜೆ ಪ್ರತಿನಿಧಿ‌ ಗೋಪಾಲ ಸಂಪಾಜೆ, ಪೆರಾಜೆ ಭಾಗದ ಪ್ರತಿನಿಧಿ ಸೀತಾರಾಮ ಕೆ.ಸಿ., ಗುತ್ತಿಗಾರಿನ ಪ್ರತಿನಿಧಿ ಸುಕೇಶ್ ಡಿ., ಮಂಡೆಕೋಲು ಪ್ರತಿನಿಧಿ ಪಿ.ಟಿ.ಮೋಹನ್ ಕುಮಾರ್, ಪಿಗ್ಮಿ ಕಲೆಕ್ಟರ್ ಪವಿತ್ರ ಕುಕ್ಕುಜಡ್ಕ, ಅಮರ ಮುಡ್ನೂರಿನ ಶಶಿಧರ ಎಂ., ಪೆರಾಜೆಯ ಜಯರಾಮ ಪಿ.ಟಿ.,
ಕಚೇರಿ ವ್ಯವಸ್ಥಾಪಕ‌ ಯಶ್ವಿತ್ ಕಾಳಮ್ಮನೆ ಹಾಗೂ ಸುದ್ದಿಯ ವರದಿಗಾರರು, ಸಿಬ್ಬಂದಿ ಗಳು ಉಪಸ್ಥಿತರಿದ್ದರು.