ಭಾರೀ ಮಳೆ: ಸುಬ್ರಹ್ಮಣ್ಯದ ಪರ್ವತಮುಖಿ ಬಳಿ ರಸ್ತೆ ಬದಿ ಕುಸಿತ, ಸಂಪರ್ಕ ಕಡಿತದ ಭೀತಿ

0

ಸುಬ್ರಹ್ಮಣ್ಯ ಮಂಜೇಶ್ವರ ಹೆದ್ದಾರಿ ಯ ಪರ್ವತಮುಖಿ ಬಳಿ ಹೆದ್ದಾರಿ ಬದಿ ಕುಸಿದಿದ್ದು ರಸ್ತೆ ಸಂಪರ್ಕ ಕಸಿದುಕೊಳ್ಳುವ ಭೀತಿ ಉಂಟಾಗಿದೆ.

ಕುಮಾರಧಾರ ನದಿಯ ಬದಿ ಮಣ್ಣು ಕುಸಿದಿದ್ದು, ನೀರಿನ ಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಿ ಮಣ್ಣು ಕುಸಿದರೆ ಅಪಾಯ ಹೆಚ್ಚಾಗುವ ಭೀತಿ ಉಂಟಾಗಿದೆ.