ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶಾಸಕಿ ಕು. ಭಾಗೀರಥಿ ಮುರುಳ್ಯ ಭೇಟಿ

0

ಬೆಳೆವಿಮೆ ನೋಂದಣಿಯ ಮಾಹಿತಿಯನ್ನು ಪಡಕೊಂಡ ಶಾಸಕರು

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರಳ್ಯರವರು ಜು.25ರಂದು
ಭೇಟಿ ನೀಡಿದರು.

ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷರಾದ ದಯಾನಂದ ಕುರುಂಜಿ ಶಾಸಕರನ್ನು ಬರಮಾಡಿಕೊಂಡರು. ಸಂಘದ ಸಮೃದ್ಧಿ ಮಾರ್ಟ್ ಗೆ ನೀಡಿದ ಬಳಿಕ ಕಚೇರಿವೆ ಭೇಟಿ ನೀಡಿ ಬೆಳೆವಿಮೆ ನೋಂದಣಿಗಳ ಬಗ್ಗೆ ಮಾಹಿತಿ ಪಡಕೊಂಡರು.

ನೂತನ ಶಾಸಕರನ್ನು ಸಂಘದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಚಂದ್ರಶೇಖರ ಚೋಡಿಪಣೆ, ನಿಧೀಶ್ ಅರಂತೋಡು, ಸೋಮಯ್ಯ ಅಡ್ಯಡ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ಮಹೇಶ್ ಕುಮಾರ್ ರೈ ಮೇನಾಲ, ಶಂಕರಲಿಂಗಂ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.