ಸುಬ್ರಹ್ಮಣ್ಯ: ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡಿಗೆ ಹೋಗುವ ರಸ್ತೆಯಲ್ಲಿ ಬಸ್‌ಗಳ ಸರ್ಕಸ್

0

ಸಾವಿರಾರು ಪ್ರಯಾಣಿಕರು ಬರುವ ರಸ್ತೆಗೆ ಯಾಕೀ ದುರ್ಗತಿ

ಕುಕ್ಕೆ ಸುಬ್ರಹ್ಮಣ್ಯ ದ ಬಸ್ ಸ್ಟ್ಯಾಂಡಿನ ಅವಸ್ಥೆಯನ್ನು ನೋಡಿದಾಗ ಯಾರಾದರೂ ಹುಬ್ಬೇರಿಸಲೇಬೇಕಾಗುತ್ತದೆ . ಕಾರಣ ಇಲ್ಲಿನ ಬಸ್ ಸ್ಟ್ಯಾಂಡಿಗೆ ಹೋಗುವ ದಿನನಿತ್ಯ ನೂರಾರು ಬಸ್ಸುಗಳು ಹೊಂಡ, ಗುಂಡಿ ದಾಟಿ ಬಸ್ ಸ್ಟ್ಯಾಂಡನ್ನು ತಲುಪಬೇಕಾಗುತ್ತದೆ. ಸಾವಿರಾರು ಭಕ್ತಾದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ,ಇದೆ ಮಾರ್ಗದಲ್ಲಿ ಸಂಚರಿಸುವಂತ ಪರಿಸ್ಥಿತಿ ಕೂಡ ಇದೆ.

ಈ ಹಿಂದೆ ಹಲವಾರು ಬಾರಿ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಅವರು ಹೇಳುವ ಒಂದೇ ಉತ್ತರ ಏನೆಂದರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದವರು ಸರಿಪಡಿಸುವಿಕೆ ವ್ಯವಸ್ಥೆ ಇರುವುದರಿಂದ ಅವರೇ ಮಾಡುತ್ತಾರೆ ಎಂದು. ಆದರೆ ಇಲ್ಲಿಯ ತನಕ ದೇವಸ್ಥಾನದವರೂ ಮಾಡಿಲ್ಲ ,ಈಚೆ ಕೆ.ಎಸ್.ಆರ್ .ಟಿ.ಸಿ ಇಲಾಖೆಯಿಂದಲೂ ಇಲ್ಲಿಯ ತನಕ ಸರಿಪಡಿಸಿರುವುದಿಲ್ಲ. ಇಲ್ಲಿ ದಿನನಿತ್ಯ ಓಡಾಡುವ ಬಸ್ಸುಗಳು, ಭಕ್ತಾದಿಗಳು ,ಪ್ರಯಾಣಿಕರೂ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಗೋಳು ತಪ್ಪಿದ್ದಲ್ಲ .ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸಿ ಇದನ್ನು ಸರಿಪಡಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.