ಕೆ.ವಿ.ಜಿ.ಪಾಲಿಟೆಕ್ನಿಕ್: ಡಾ. ಕೆ.ವಿ.ಜಿ.ಯವರ ಪುಣ್ಯ ತಿಥಿ ಅಂಗವಾಗಿ ನುಡಿನಮನ

0

ಅಮರ ಸುಳ್ಯದ ಶಿಲ್ಪಿ, ಶಿಕ್ಷಣ ಕ್ರಾಂತಿಯ ಹರಿಕಾರ ಡಾ. ಕುರುಂಜಿ ವೆಂಕಟ್ರಮಣ ಗೌಡರ ಹತ್ತನೇ ಪುಣ್ಯ ತಿಥಿಯ ಅಂಗವಾಗಿ ನುಡಿನಮನ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ನುಡಿನಮನ ಸಲ್ಲಿಸಿದರು.

ಉಪ ಪ್ರಾಂಶುಪಾಲ ಶ್ರೀಧರ್ ಎಂ.ಕೆ, ಅಕಾಡೆಮಿಕ್ ಡೀನ್ ಚಂದ್ರಶೇಖರ ಎಮ್.ಎನ್, ಕಛೇರಿ ಅಧೀಕ್ಷಕ ರುಗಳಾದ ಶಿವರಾಮ ಕೇರ್ಪಳ, ಧನಂಜಯ ಕಲ್ಲುಗದ್ದೆ , ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.