ಬೆಳ್ಳಾರೆ: ಗೌರಿಹೊಳೆ ಸಂಕದ ಮೇಲೆ ಅಪಾಯವನ್ನು ಆಹ್ವಾನಿಸುತ್ತಿರುವ ಹೊಂಡಗಳು

0

ಬೆಳ್ಳಾರೆಯ ಗೌರಿಹೊಳೆ ಸಂಕದ ಮೇಲೆ ಮುಖ್ಯ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು, ಅಪಾಯ ಎದುರಾಗುವ ಮುನ್ನ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕಾಗಿದೆ.


ನೂತನ ಸಂಕ ನಿರ್ಮಾಣ ಆದಲ್ಲಿಂದ ಪ್ರತೀ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿ ಹೊಂಡ ನಿರ್ಮಾಣವಾಗಿ ಹೊಂಡದಲ್ಲಿ ನೀರು ತುಂಬಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಮೂರು ವರ್ಷಗಳ ಹಿಂದೆ ಇದೇ ಜಾಗದಲ್ಲಿ ಹೊಂಡ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಬಸ್ಸಿಗೆ ಗುದ್ದಿ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆಯೂ ನಡೆದಿದೆ. ಪ್ರತೀ ವರ್ಷ ಈ ಹೊಂಡ ನಿರ್ಮಾಣದ ದುಸ್ಥಿತಿ ಮರುಕಳಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿ ಎಂಬುದು ಪ್ರಯಾಣಿಕರು ಆಗ್ರಹಿಸಿದ್ದಾರೆ