ಚೆಂಬು : ವೀಲ್ ಚಯರ್ ವಿತರಣೆ

0


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್, ಮಡಿಕೇರಿ ತಾಲೂಕು, ಸಂಪಾಜೆ ವಲಯದ ಎಂ.ಚೆಂಬು ಕಾರ್ಯಕ್ಷೇತ್ರದಲ್ಲಿ ಮರ್ಧಾಳ ತಿಮ್ಮಯ್ಯ ಮತ್ತುಬೊಳ್ಳುರು ಹರೀಶರವರಿಗೆ ಗಾಲಿ ಚಕ್ರ (ವ್ಹೀಲ್ ಚೇರ್) ವಿತರಣಾ ಕಾರ್ಯಕ್ರಮವು ಆ.೧೦ ರಂದು ಬಾಲಂಬಿ ಸೇವಾ ಕೇಂದ್ರದಲ್ಲಿ ನಡೆಯಿತು.


ವಲಯ ಮೇಲ್ವಿಚಾರಕರಾದ ಶ್ರೀಮತಿ ವಿನೋದರವರು ಗಾಲಿ ಚಕ್ರವನ್ನು ಫಲಾನುವಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎಂ. ಚೆಂಬು ಮತ್ತು ಯು.ಚೆಂಬು ಒಕ್ಕೂಟಗಳ ಅಧ್ಯಕ್ಷರುಗಳಾದ ಕೃಷ್ಣವೇಣಿ ಮತ್ತು ಲಿಂಗಪ್ಪ ಪೀ ಬಿ., ಸೇವಾಪ್ರತಿನಿಧಿ ಬೋಜಪ್ಪ ,ಸೇವಾಕೆಂದ್ರದ ನವ್ಯಕುಮಾರಿ, ವೇಣು ಗೋಪಾಲ್ ಮರ್ಧಾಲ, ಯೋಗಿತಾ ಬೊಳ್ಳುರು ಉಪಸ್ಥಿತರಿದ್ದರು.