ಕುಕ್ಕುಜಡ್ಕ: ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಅಮರಮುಡ್ನೂರಿನ ಕುಕ್ಕುಜಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ‌ಯ ವತಿಯಿಂದ ನಡೆಯಲಿರುವ 31ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಆ.23 ರಂದು ಕುಕ್ಕುಜಡ್ಕದ ಶ್ರೀ ವಿಷ್ಣುಮೂರ್ತಿ,ರಕ್ತೇಶ್ವರಿ ದೈವಸ್ಥಾನದ ವಠಾರದಲ್ಲಿ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರರು,ಹಿರಿಯರಾದಎಂ.ಜಿ.ಸತ್ಯನಾರಾಯಣ ರವರು ಬಿಡುಗಡೆಗೊಳಿಸಿ ಶುಭ‌ ಹಾರೈಸಿದರು.

ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭುವನೇಶ್ವರಿ ಪದವು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಶವ ಗೌಡ ಕರ್ಮಾಜೆ, ನಿರ್ದೇಶಕ ರಾಧಾಕೃಷ್ಣ ಬೊಳ್ಳೂರು, ಸಮಿತಿಯ ಅಧ್ಯಕ್ಷ ಮುರಳಿ ನಳಿಯಾರು, ಆಮಂತ್ರಣ ಪತ್ರಿಕೆಯ ದಾನಿ ಹರ್ಷಿತ್ ಗೆಜ್ಜೆ,ಶ್ರೀ ಮಹಾವಿಷ್ಣು ಅಟೋ ರಿಕ್ಷಾ ಚಾಲಕರ ಸಂಘದ ಆಧ್ಯಕ್ಷರು ಮತ್ತುಸದಸ್ಯರು,

ಗಣೇಶೋತ್ಸವ ಸಮಿತಿಯ ಮಾಜಿ ಆಧ್ಯಕ್ಷರು ಮತ್ತು ಸದಸ್ಯರು,ಗ್ರಾಮ ಪಂಚಾಯತ್ ಸದಸ್ಯರು,ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.
ಸಮಿತಿಯ ಮಾಜಿ ಅಧ್ಯಕ್ಷ ಗಣೇಶ ಪಿಲಿಕಜೆ ಸ್ವಾಗತಿಸಿದರು, ಸಮಿತಿಯ ಕಾರ್ಯದರ್ಶಿ ಜನಾರ್ದನ ಪೈಲೂರು ವಂದಿಸಿದರು.