ರಾಜ್ಯ ಸರ್ಕಾರದ ನೂರನೇ ದಿನ

0

ಕಲ್ಲುಗುಂಡಿ ಯಲ್ಲಿ ವಿಜಯೋತ್ಸವ

ಸಂಪಾಜೆ ವಲಯ ಕಾಂಗ್ರೇಸ್ ವತಿಯಿಂದ ರಾಜ್ಯ ಕಾಂಗ್ರೇಸ್ ಸರ್ಕಾರದ ನೂರನೇ ದಿನವನ್ನು ಪೂರ್ತಿಗೊಳಿಸಿದ ದಿನದಂದು ಕಲ್ಲುಗುಂಡಿ ಕೂಲಿಶೆಡ್ ಬಳಿ ಕಾರ್ಯಕ್ರಮ ಆಯೋಜಿಸಲಾಯಿತು.ಸಂಪಾಜೆ ವಲಯ ಕಾಂಗ್ರೇಸ್ ಅಧ್ಯಕ್ಷ ಸೋಮಶೇಖರ್ ಕೊಇಂಗಾಜೆ ಅಧ್ಯಕ್ಷ ವಹಿಸಿದ್ದರು.

ಸಮಾರಂಭ ದಲ್ಲಿ ದ.ಕ.ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಮಹಮ್ಮದ್ ಕುಂಜಿ ಗೂನಡ್ಕ,ಗ್ರಾಮ ಪಂಚಾಯತ್ ಸದಸ್ಯ ರಾದ ಅಬುಸಲಿ,ಶೌವಾದ್ ಗೂನಡ್ಕ,ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೇಸ್ ಸಮಿತಿ ಉಪಾಧ್ಯಕ್ಷ ಎ.ಕೆ.ಇಬ್ರಾಹಿಂ,

ಜಿಲ್ಲಾ ಕಾರ್ಮಿಕ ಘಟಕದ ಮುಖಂಡ ರಾಜು ನೆಲ್ಲಿಕುಮೇರಿ, ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಪಿ.ಜಾನಿ, ತಾಜ್ ಮಹಮದ್ ಸಂಪಾಜೆ,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ,ಕೆ.ಎಮ್.ಆಶ್ರಫ್,ಎ.ಕೆ.ಹನೀಫ್,ಕೇರೋಲಿನ್ ಕ್ರಸ್ತಾ,ವಲಯ ಕಾರ್ಯದರ್ಶಿ ಲೂಕಾಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು