ಅವೈಜ್ಞಾನಿಕ ರೀತಿಯಲ್ಲಿ ಗ್ಯಾಸ್ ‌ಹಂಡೆಗಳ ಶೇಖರಣೆ : ಅಪಾಯ ಸಂಭವಿಸುವ ಮೊದಲು ಕ್ರಮಕ್ಕೆ

0

ಅಜ್ಜಾವರ ಗ್ರಾ.ಪಂ.ಗೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಮನವಿ

ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿರುವ ಗ್ಯಾಸ್ ಸಿಲಿಂಡರ್ ಗೋಡಾನ್ ನಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಗ್ಯಾಸ್ ಸಿಲಿಂಡರ್ ಇಡಲಾಗಿದೆ. ‌ಅಪಾಯ ಸಂಭವಿಸುವ ಮೊದಲು ಕ್ರಮಕೈಗೊಳ್ಳಬೇಕು ಎಂದು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಸತೀಶ್ ಬೂಡುಮಕ್ಕಿಯವರ ನೇತೃತ್ವದಲ್ಲಿ ಅಜ್ಜಾವರ ಗ್ರಾ.ಪಂ. ಅಧ್ಯಕ್ಷ ರಿಗೆ ಮನವಿ ಸಲ್ಲಿಸಲಾಗಿದೆ.

ವಿವರ ವಾದ ಮನವಿ ಗ್ರಾ.ಪಂ. ಗೆ ನೀಡಲಾಗಿದ್ದು, ಗೋಡಾನ್ ನ ಕಾಂಪೌಂಡ್ ಹೊರಗೆ ಬೇಕಾ ಬಿಟ್ಟಿಯಾಗಿ ತುಂಬಿದ ಸಿಲಿಂಡರ್ ಹಾಕಲಾಗುತ್ತಿದೆ. ಸಮೀಪದಲ್ಲೆ ಪ.ಜಾತಿ‌ ಕಾಲೊನಿ, ಹಾಸ್ಟೆಲ್ ಗಳಿವೆ. ಅಪಾಯ ಸಂಭವಿಸುವ‌ ಮೊದಲು ಅವರಿಗೆ ಪಂಚಾಯತ್ ವತಿಯಿಂದ ಸೂಚನೆ ನೀಡಬೇಕೆಂದು‌ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಚಂದ್ರಶೇಖರ್ ಪಲ್ಲತ್ತಡ್ಕ, ಸುನಿಲ್ ಕಾಂತಮಂಗಲ, ದಯಾನಂದ ಕಾಂತಮಂಗಲ, ಹರೀಶ್ ಮೇನಾಲ
ಹಾಗೂ ಸಮಿತಿ ಸದಸ್ಯರು ಹಾಜರಿದ್ದರು