ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಕೃಷ್ಣ ಸ್ಪರ್ಧೆ

0

ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪೂರ್ವ ಪ್ರಾಥಮಿಕ ವಿಭಾಗದ ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆಯನ್ನು ಸೆ.
7ರಂದು ಏರ್ಪಡಿಸಲಾಯಿತು.


ಶಾಲಾ ಸಂಚಾಲಕರಾದ ಫಾದರ್ ವಿಕ್ಟರ್ ಡಿಸೋಜ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮರವರು ಶುಭ ಹಾರೈಸಿದರು. ಸುಮಾರು 50 ಪುಟಾಣಿಗಳು ಕೃಷ್ಣವೇಷ ಧರಿಸಿದರು. ಎಲ್ ಕೆ ಜಿ ವಿಭಾಗದಿಂದ ಸಾನಿಯಾ ಬಿ ಪ್ರಥಮ ,ನಿಧಿಶ್ ಕೆ ದ್ವಿತೀಯ , ಹನಿಕಾ ಡಿ ತೃತೀಯ ಬಹುಮಾನವನ್ನು ಪಡೆದುಕೊಂಡರು.ಯುಕೆಜಿ ವಿಭಾಗದಿಂದ ಆರ್ವಿ ಎ ಪ್ರಥಮ , ಸ್ವಸ್ತಿ ಎಜಿ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಆರ್ವಿ ಜೆ ಯವರು ಪಡೆದುಕೊಂಡರು.

ಇವರಿಗೆ ಶಾಲಾ ಸಂಚಾಲಕರು ಹಾಗೂ ಮುಖ್ಯ ಶಿಕ್ಷಕಿಯವರು ಬಹುಮಾನವನ್ನು ವಿತರಿಸಿದರು ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಸಮಾಧಾನಕರ ಬಹುಮಾನವನ್ನು ಪೂರ್ವ ಪ್ರಾಥಮಿಕ ವಿಭಾಗದ ಪೋಷಕ ಸಮಿತಿಯ ಸದಸ್ಯರಾದ ಗುರುಪ್ರಸಾದ್ ರೈಯವರು ವಿತರಿಸಿದರು. ಶಿಕ್ಷಕಿ ಶ್ರೀಮತಿ ವಿದ್ಯಾ ಸರಸ್ವತಿ ಹಾಗೂ ಶಿಕ್ಷಕಿ ಶ್ರೀಮತಿ ಕವಿತಾ ರವರು ತೀರ್ಪುಗಾರರಾಗಿ ಸಹಕರಿಸಿದರು. ಶಿಕ್ಷಕಿ ಶ್ರೀಮತಿ ಆಶಾರವರು ನಿರೂಪಿಸಿ,ಸಹ ಶಿಕ್ಷಕಿಯರಾದ ಶ್ರೀಮತಿ ಮರಿಯಕ್ರಾಸ್ತಾ, ಶ್ರೀಮತಿ ಸುಮತಿ ಹಾಗೂ ಶ್ರೀಮತಿ ರೇಷ್ಮಾ ಡಿಸೋಜರವರು ಸಹಕರಿಸಿದರು.