ಪಂಜ :ನವೋದಯ ಚೈತನ್ಯ ವಿಮಾ ಚೆಕ್ ವಿತರಣೆ

0

ಆಕಸ್ಮಿಕವಾಗಿ ಮರದಿಂದ ಬಿದ್ದು ಮೃತಪಟ್ಟ ಬಳ್ಪ ನವಶಕ್ತಿ ನವೋದಯ ಗುಂಪು ಇದರ ಸದಸ್ಯ ದಾಮೋದರ ಗೌಡ ರವರ ಕುಟುಂಬಕ್ಕೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚೈತನ್ಯ ವಿಮಾ ಯೋಜನೆಯಲ್ಲಿ ಮಂಜೂರಾದ ರೂ.1ಲಕ್ಷದ ಚೆಕ್‌ ನ್ನು ಅವರ ಪತ್ನಿ ಶ್ರೀಮತಿ ರುಕ್ಮಿಣಿ ಯವರಿಗೆ ಸೆ.14 ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿತರಿಸಲಾಯಿತು.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ ಪೃೆ ರವರು ಚೆಕ್ ವಿತರಿಸಿದರು.


ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ,ಸುಳ್ಯ ತಾಲೂಕು ನವೋದಯ ಮೇಲ್ವಿಚಾರಕ ಶ್ರೀಧರ ಮಾಣಿಮರ್ಧು, ವಲಯ ಪ್ರೇರಕ ಹೇಮಂತ್ ಪೋಳೆ, ಗುಂಪಿನ ಸದಸ್ಯರಾದ ರಾಧಾಕೃಷ್ಣ ನಾದೂರು, ಪುಟ್ಟಣ್ಣ ಕುಂಜತ್ತಾಡಿ, ಚಂದ್ರಪ್ರಸಾದ್ ಕುಂಜತ್ತಾಡಿ ಉಪಸ್ಥಿತರಿದ್ದರು.