ಅಜ್ಜಾವರ : ಶ್ರೀ ರಕ್ಷಾ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ

0

ಅಜ್ಜಾವರ ಗ್ರಾಮ ಪಂಚಾಯತ್ ಮಟ್ಟದ ಶ್ರೀ ರಕ್ಷಾ ಸಂಜೀವಿನಿ ಒಕ್ಕೂಟ ಪದಾಧಿಕಾರಿಗಳ ಆಯ್ಕೆಯು ಸೆ.14ರಂದು ಅಜ್ಜಾವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷರಾದ ಯಂ. ಯಶೋಧ ಅಧ್ಯಕ್ಷತೆ ವಹಿಸಿದ್ದರು.

ಪಂಚಾಯತ್ ಅಧ್ಯಕ್ಷೆ ಬೇಬಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲಾ, ತಾಲೂಕು ವಲಯ ಮೇಲ್ವಿಚಾರಕ ಮಹೇಶ್, ಒಕ್ಕೂಟದ ಕಾರ್ಯದರ್ಶಿ ಶೃತಿ, ಉಪಾಧ್ಯಕ್ಷೆ ವೀಣಾ ಕಿರಣ್ ರೈ, ಕೋಶಾಧಿಕಾರಿ ಕುಸುಮಾವತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಾರ್ಡ್ ಮಟ್ಟದ ಒಕ್ಕೂಟ ರಚನೆಯ ಬಳಿಕ ಗ್ರಾಮ ಮಟ್ಟದ ಒಕ್ಕೂಟ ರಚನೆ ಮಾಡಲಾಯಿತು. ನೂತನವಾಗಿ ಒಕ್ಕೂಟದ ಅಧ್ಯಕ್ಷರಾಗಿ ಮಮತಾ ರೈ ಮೇನಾಲ, ಉಪಾಧ್ಯಕ್ಷರಾಗಿ ಮಂಜುಳಾ, ಕಾರ್ಯದರ್ಶಿಯಾಗಿ ರೇವತಿ ದೊಡ್ಡೇರಿ, ಜೊತೆ ಕಾರ್ಯದರ್ಶಿಯಾಗಿ ಕುಸುಮ, ಕೋಶಾಧಿಕಾರಿಯಾಗಿ ಚಂದ್ರಿಕಾ ಇವರನ್ನು ಆಯ್ಕೆ ಮಾಡಲಾಯಿತು.

ಸಂಜೀವಿನಿ ಮಹಿಳೆಯರಿಗೆ ಸಿಗುವ ಸವಲತ್ತು ಸ್ವ ಉದ್ಯೋಗ ಹೀಗೆ ಹಲವು ಚಟುವಟಿಕೆ ಮಾಡುವ ಬಗ್ಗೆ ತಾಲೂಕು ವಲಯ ಮೇಲ್ವಿಚಾರಕ ಮಹೇಶ್ ಮಾಹಿತಿ ನೀಡಿದರು. ಶ್ರೀ ವಿಷ್ಣು ಸಂಘದ ಗೋಪಿ ಶೆಟ್ಟಿ ಇವರಿಗೆ ಅಡಿಕೆ ಕೃಷಿ ಚಟುವಟಿಕೆ ಮಾಡಲು ರೂ.30,000 ದ ಚೆಕ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಂ ಆರ್ ಡಬ್ಲ್ಯೂ ಪ್ರೇರಕರಾದ ಉಮ್ಮರ್, ಸಂಜೀವಿನಿ, ಸ್ತ್ರೀಶಕ್ತಿ, ನವೋದಯ, ಸಂಘದ ಸದಸ್ಯರು ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು. ದೀಕ್ಷಿತ ಪ್ರಾರ್ಥಿಸಿ, ಹರಿಣಾಕ್ಷಿ. ಕೆ ಸ್ವಾಗತಿಸಿ, ವಾಣಿ ವರದಿ ಮಂಡಿಸಿ, ಪೂರ್ಣಿಮಾ ವಂದಿಸಿ, ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.