ಪಾಲೆಪ್ಪಾಡಿಯಲ್ಲಿ 31 ನೇ ವರ್ಷದ ಶ್ರೀ ಗಣೇಶೋತ್ಸವ

0

ಶ್ರೀ ಗಣಪತಿ ಹವನ,ಗಣೇಶನ ಮೂರ್ತಿ ಪ್ರತಿಷ್ಠಾಪನೆ

ಐವರ್ನಾಡು ಗ್ರಾಮದ ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಾಲೆಪ್ಪಾಡಿ ವತಿಯಿಂದ 31 ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಸೆ.19 ರಂದು ಮಂಜುಶ್ರೀ ಕ್ರೀಡಾಂಗಣ ದರ್ಖಾಸ್ತು ಪಾಲೆಪ್ಪಾಡಿಯಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು
ಬೆಳಿಗ್ಗೆ ಶ್ರೀ ಗಣಪತಿ ಹವನ ಹಾಗೂ ಶ್ರೀ ಗಣೇಶನ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.
ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕು.ರಶ್ಮಿತಾ ಪರ್ಲಿಕಜೆ ಇವರನ್ನು ಗೌರವಿಸಲಾಗುವುದು.


ಪೂರ್ವಾಹ್ನ ಗಂಟೆ 11.00 ರಿಂದ ಮಂಜುಶ್ರೀ ಭಜನಾ ಮಂಡಳಿ ಪಾಲೆಪ್ಪಾಡಿ ಮತ್ತು ಶ್ರೀ ಗುರುದೇವಾನಂದ ಭಜನಾ ಮಂಡಳಿ ಐವರ್ನಾಡು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಗಂಟೆ 2.00 ರಿಂದ ಶ್ರೀ ಇರ್ವೆರ್ ಉಳ್ಳಾಕುಲು ಭಜನಾ ಮಂಡಳಿ ಪಾಲೆಪ್ಪಾಡಿ ಇದರ ಸದಸ್ಯರಿಂದ ಕುಣಿತ ಭಜನೆ ನಡೆಯಲಿದೆ.
ಸಂಜೆ ಗಂಟೆ 4.00 ರಿಂದ ಶ್ರೀ ಗಣೇಶನ ಶೋಭಾಯಾತ್ರೆಯು ಚೆಂಡೆ,ವಾದ್ಯ ಘೋಷಗಳೊಂದಿಗೆ ಪಾಲೆಪ್ಪಾಡಿಯಿಂದ ಹೊರಟು ಬಾಂಜಿಕೋಡಿ ಹೊಳೆಯಲ್ಲಿ ಜಲಸ್ತಂಭನ ಮಾಡಲಾಗುವುದು.