ಪೆರಾಜೆ : ಜ್ಯೋತಿ ವಿದ್ಯಾಸಂಘದ ವಾರ್ಷಿಕ ಮಹಾಸಭೆ

0

ಅಧ್ಯಕ್ಷರಾಗಿ ಎನ್. ಎ. ಜ್ಞಾನೇಶ್, ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಮುಡುಕಜೆ ಆಯ್ಕೆ

ಪೆರಾಜೆ ಜ್ಯೋತಿ ವಿದ್ಯಾಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.28 ರಂದು ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ನಡೆಯಿತು.
ಬೆಳಿಗ್ಗೆ ವೇದ ವ್ಯಾಸ ಭಟ್ ರವರು ಗಣಪತಿ ಹವನ ನಡೆಸಿಕೊಟ್ಟರು.


ನಂತರ ನಡೆದ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚನೆ ಮಾಡಲಾಯಿತು.


ಅಧ್ಯಕ್ಷರಾಗಿ ಎನ್. ಎ. ಜ್ಞಾನೇಶ್ ಹಾಗೂ ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಮುಡುಕಜೆ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಪದ್ಮಯ್ಯ ಕೆ. ಕೆ., ನಂಜಪ್ಪ ನಿಡ್ಯಮಲೆ, ಕೋಶಾಧಿಕಾರಿಗಳಾಗಿ ಲೋಕನಾಥ ಅಮೆಚೂರು, ಸಹ ಕಾರ್ಯದರ್ಶಿಗಳಾಗಿ ಪಿ. ಜಿ. ವೇದವ್ಯಾಸ ಭಟ್ ಆಯ್ಕೆಯಾದರು. ನಿರ್ದೇಶಕರುಗಳಾಗಿ ಎನ್. ಎ. ರಾಮಚಂದ್ರ, ಡಿ. ಪಿ. ಪೂವಪ್ಪ, ಕೆ. ಬಿ. ಕೃಷ್ಣಪ್ಪ, ಸುರೇಶ್ ಪೆರುಮುಂಡ, ವಿಶ್ವನಾಥ ಪೆರುಮುಂಡ, ರಾಜಗೋಪಾಲ ಆರ್. ಸಿ., ಅಶೋಕ ಪೀಚೆ, ಶ್ರೀಮತಿ ಶಕುಂತಳಾ ಉಮಾಸುಂದರ್ ರೈ, ಪದ ನಿಮಿತ್ತ ನಿರ್ದೇಶಕರುಗಳಾಗಿ ಶಾಲಾ ಮುಖ್ಯಶಿಕ್ಷಕ ಜಿ. ಆರ್. ನಾಗರಾಜ್ ರವರನ್ನು ಆಯ್ಕೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿ, ಲೋಕನಾಥ ಅಮೆಚೂರು ಸ್ವಾಗತಿಸಿದರು. ವಿಶ್ವನಾಥ ಪೆರುಮುಂಡ ವಂದಿಸಿ, ಶಿಕ್ಷಕಿ ಶ್ರೀಮತಿ ಚಂದ್ರಮತಿ ಕೆ. ಎಂ. ಕಾರ್ಯಕ್ರಮ ನಿರೂಪಿಸಿದರು.