ಮಾಧವ ಗೌಡ ಮಾಡಬಾಗಿಲು ವೈಕುಂಠ ಸಮಾರಾಧನಾ ಸಮಾರಂಭ

0

ದೇವಚಳ್ಳ ಗ್ರಾಮದ ಮಾಧವ ಗೌಡ ಮಾಡಬಾಗಿಲು ಅವರ ವೈಕುಂಠ ಸಮಾರಂಭವು ಅ.1 ರಂದು ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್ ನ ಸಭಾಭವನದಲ್ಲಿ ನಡೆಯಿತು.

ಮಾದವ ಗೌಡರ ಅವರ ಬಗ್ಗೆ ನುಡಿನಮನ ಅರ್ಪಿಸಿದ ಕಿಶೋರ್ ಕುಮಾರ್ ಪೈಕ ಬೊಮ್ಮದೇರೆ ಅವರು ರಕ್ತವನ್ನೆ ಬೆವರಾಗಿ ದುಡಿದವರು ಮಾದವರು. ಸ್ವಾಬಿಮಾನ, ಸ್ವಾವಲಂಬಿ, ಅಭಿಮಾನ ಕಟ್ಟಿಕೊಂಡು ಎಲ್ಲರಿಗೂ ಎಂದಿಗೂ ಅನ್ವಯವಾಗುವಂತೆ ಬಾಳಿದವರು. ಅವರು ಸುಣ್ಣ ಕಾರ್ಖಾನೆಯನ್ನು ಮಾಡಿ ಯಶಸ್ವಿಗೊಳಿಸಿ ಕೃಷಿಯೊಂದಿಗೆ ಜೀವನವನ್ನು ಸಾಗಿಸಿದವರು ಎಂದರು. ಆಗಮಿಸಿದ ಬಂಧುಗಳು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದರು. ಕಾರ್ಯಕ್ರಮದಲ್ಲಿ ಕುಟುಂಬಸ್ಥರು,ಬಂಧುಗಳು ಭಾಗವಹಿಸಿದ್ದರು.