ಅರಂತೋಡು ಬಸ್ ನಲ್ಲಿ ಕಂಡಕ್ಟರ್ ವರ್ತನೆಗೆ ಪ್ರಯಾಣಿಕರ ಅಸಮಾಧಾನ

0

ಬಸ್ ನಿಲ್ಲಿಸಿ ತರಾಟೆ

ಸುಳ್ಯದಿಂದ ಅರಂತೋಡು‌ ಮಾರ್ಗವಾಗಿ ಸಂಪಾಜೆ ಕಡೆಗೆ ಹೋಗುವ ಬಸ್ ನಲ್ಲಿ ಕಂಡಕ್ಟರ್ ಅಮಲು ಸೇವಿಸಿ ಪ್ರಯಾಣಿಕರೊಂದು ನಡೆದುಕೊಂಡ ರೀತಿಯಿಂದ ಅಸಮಾಧಾನ ಗೊಂಡ ಪ್ರಯಾಣಿಕರು ಅರಂತೋಡಿನಲ್ಲಿ ಬಸ್ ನಿಲ್ಲಿಸಿ ತರಾಟೆಗೆತ್ತಿಕೊಂಡ ಘಟನೆ ವರದಿಯಾಗಿದೆ.

ಇಂದು ಮಧ್ಯಾಹ್ನ ಈ ಘಟನೆ ನಡೆದಿದ್ದು ಕಂಡಕ್ಟರ್ ಅಮಲು ಸೇವಿಸಿ ಬಸ್ ನಲ್ಲಿ ಕಿರಿಕಿರಿ‌ ಮಾಡುತ್ತಿದ್ದರೆಂದೂ ಅರಂತೋಡು ನಲ್ಲಿ ಬಸ್ ನಿಲ್ಲಿಸಿದ ಪ್ರಯಾಣಿಕರು ತರಾಟೆಗೆತ್ತಿಕೊಂಡರಲ್ಲದೆ, ಡಿಪೋ‌ ಮ್ಯಾನೇಜರ್ ರಿಗೆ ವಿಷಯ ತಿಳಿಸಿದರೆಂದು ತಿಳಿದುಬಂದಿದೆ.