ಸ್ನೇಹದಲ್ಲಿ ಸಂಸ್ಕೃತ ಶಿಕ್ಷಣ : ಜಯಲಕ್ಷ್ಮಿ ದಾಮ್ಲೆಯವರಿಗೆ ಸನ್ಮಾನ

0

ಸುಳ್ಯದ ಸ್ನೇಹ ಶಾಲೆಯ ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಕರ್ನಾಟಕ ಸಂಸ್ಕೃತ ಭಾರತಿಯವರು ನಡೆಸುತ್ತಿರುವ “ಪ್ರವೇಶ” ಪರೀಕ್ಷೆಯಲ್ಲಿ 85 ಅಂಕಗಳನ್ನು ಗಳಿಸಿ ಡಿಸ್ಟಿಕ್ಷನ್ ಪಡೆದು ತೇರ್ಗಡೆಯಗಿದ್ದು, ಅವರು 63 ನೇ ವಯಸ್ಸಿನಲ್ಲಿ ಮೂರೇ ತಿಂಗಳಲ್ಲಿ ಆನ್ ಲೈನ್ ತರಗತಿಗಳಲ್ಲಿ ಕಲಿತು ಮಾಡಿದ ಸಾಧನೆಗಾಗಿ ಸನ್ಮಾನ ಕಾರ್ಯಕ್ರಮ ಅ.7 ರಂದು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ಸನ್ಮಾನಿಸಿದರು.
ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಶುಭಹಾರೈಸಿದರು.

ಸನ್ಮಾನವನ್ನು ಸ್ವೀಕರಿಸಿದ ಸ್ನೇಹ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿಯವರು ಸನ್ಮಾನಕ್ಕೆ ಉತ್ತರಿಸಿದರು.
ಅಧ್ಯಕ್ಷತೆಯನ್ನು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ವಹಿಸಿದ್ದರು. ಶಿಕ್ಷಕಿ ಶ್ರೀಮತಿ ಸವಿತಾ ಎಂ ಅಭಿನಂದನಾ‌ ಭಾಷಣ ಮಾಡಿದರು.

ಸಂಸ್ಥೆಯ ಶಿಕ್ಷಕಿ ಶ್ರೀಮತಿ ಗಿರಿಜಾ ಕುಮಾರಿ.ಎಂ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಕವಿತಾ.ಹೆಚ್.ಎ. ಇವರು ವಂದಿಸಿದರು. ಶಿಕ್ಷಕ ದೇವಿಪ್ರಸಾದ ಜಿ ಸಿ ಕಾಯರ್ತೋಡಿ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವರ್ಗದವರು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.