ನಾಗಪಟ್ಟಣ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಪಿಕ್ ಅಪ್

0

ಆಲೆಟ್ಟಿ ರಸ್ತೆಯ ನಾಗಪಟ್ಟಣ ವಿಶ್ರಾಂತಿ ಗೃಹದ ಬಳಿ ತಿರುವಿನಲ್ಲಿ ಕೇರಳದ ಪಾಣತ್ತೂರು ಕಡೆಗೆ ತರಕಾರಿ ಹೇರಿಕೊಂಡು ಹೋಗುತ್ತಿದ್ದ ಬೊಲೆರೊ ಪಿಕ್ ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ವಾಲಿತು. ವಾಹನದಲ್ಲಿ ತುಂಬಿದ್ದ ತರಕಾರಿಯನ್ನು ಅನ್ ಲೋಡ್ ಮಾಡಿ ಬೇರೆ ವಾಹನಕ್ಕೆ ತುಂಬಿಸಿ ಬಳಿಕ ಪಿಕ್ ಅಪ್ ನ್ನು ಬೇರೆ ವಾಹನಕ್ಕೆ ಹಗ್ಗ ಕಟ್ಟಿ ಮೇಲಕ್ಕೆತ್ತಲಾಯಿತು. ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲವೆಂದು ತಿಳಿದು ಬಂದಿದೆ.