ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ :ಅಗ್ನಿಪಥ್‌ಗೆ ಆಯ್ಕೆಯಾದ ಅಗ್ನಿವೀರರಿಗೆ ಸನ್ಮಾನ

0


ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ, ಐ.ಕ್ಯೂ.ಎ.ಸಿ ವಿಭಾಗ, ಮತ್ತು ಪ್ಲೇಸ್ ಮೆಂಟ್ ಸೆಲ್ ಇದರ ವತಿಯಿಂದ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿ ಅಗ್ನಿಪಥ್‌ಗೆ ಆಯ್ಕೆಯಾದ ಅಗ್ನವೀರರಿಗೆ ಸನ್ಮಾನ ಕಾರ್‍ಯಕ್ರಮವು ಅ. ೧೮ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ಅತಿಥಿಗಳಾಗಿ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಕ್ಯಾಪ್ಟನ್ ಸುದಾನಂದ ಪೆರುವಾಜೆ ಆಗಮಿಸಿದ್ದರು. ಅಗ್ನಿವೀರರಾಗಿ ಆಯ್ಕೆಯಾದ ಕಾಲೇಜಿನ ಬಿ.ಎ ವಿಭಾಗದ ವಿದ್ಯಾರ್ಥಿಯಾಗಿದ್ದ ಅಭಿಷೇಕ್ ಎಂ, ಪ್ರಸ್ತುತ ಅಂತಿಮ ಬಿ.ಕಾಂ ವಿದ್ಯಾರ್ಥಿ ದರ್ಶನ್ ಎನ್ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿ ಜಿತೇಶ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಅಭಿಷೇಕ್. ದರ್ಶನ್ , ಜಿತೇಶ್ ಇವರುಗಳು ತಾವು ಆಯ್ಕೆಯಾಗಲು ನಡೆಸಿದ ಪ್ರಯತ್ನಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ ಜಯಶ್ರೀ ಆಂತರಿಕ ಗುಣಮಟ್ಟ ಕೋಶ ಮತ್ತು ಉದ್ಯೋಗ ಮಾಹಿತಿ ಕೋಶ ಇದರ ಸಂಚಾಲಕರಾದ ಗೀತಾ ಎಸ್ ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ವಿದ್ಯಾರ್ಥಿನಿ ಮಾದುರ್‍ಯ ಎನ್ ಉಡುಪ ಸ್ವಾಗತಿಸಿದರು. ಅನುಷ್ ಕೆ.ಎಂ ವಂದಿಸದರು. ಅಭಿಷೇಕ್ ಕೆ.ಸಿ ಕಾರ್‍ಯಕ್ರಮ ನಿರೂಪಿಸಿದರು.