ವೇಷ ಧರಿಸಿ ಪುಟಾಣಿಯ ಚಿಕಿತ್ಸೆಗೆ ನಿಧಿ ಸಂಗ್ರಹಿಸಿದ -ಸಾಮಾಜಿಕ ಕಾಳಜಿಯ ಪಂಬೆತ್ತಾಡಿಯ ಚಿಗುರು ತಂಡ

0

ನವರಾತ್ರಿ ಉತ್ಸವದ ವೇಳೆ ಅ.19 ರಂದು ಪಂಬೆತ್ತಾಡಿ ಚಿಗುರು ತಂಡದ ಸದಸ್ಯರು ಪಂಬೆತ್ತಾಡಿ ವೇಷ ಧರಿಸಿ ಪುಟಾಣಿಯೊಬ್ಬಳ ಚಿಕಿತ್ಸೆಗೆ ನಿಧಿ ಸಂಗ್ರಹಿಸಿ ಮಾದರಿಯಾಗಿದ್ದಾರೆ. ಚಿಗುರು ತಂಡದ ಸದಸ್ಯರು
ವಿಶೇಷ ವೇಷ ಧರಿಸಿ ನಿಧಿ ಸಂಗ್ರಹ ಹಣವನ್ನು ಬೆಳ್ಳಾರೆ ಮುಡಾಯಿತೋಟ ಶ್ರೀಮತಿ ಮಮತಾ ಶಶಿಧರ್ ರವರ ಪುತ್ರಿ ಪುಟಾಣಿ ಧನ್ಯಶ್ರೀ ಅವರಿಗೆ ರೂ.43,160 ಚೆಕ್ ಮೂಲಕ ಹಸ್ತಾಂತರಿಸಿದ್ದಾರೆ.


ಕಳೆದ ವರ್ಷವು ಇದೇ ತಂಡವು ಬೇರೊಂದು ಮಗುವಿಗಾಗಿ ಒಂದು ದಿನ ವೇಷ ಧರಿಸಿ ರೂ.48000ನಿಧಿ ಸಂಗ್ರಹಿಸಿ ಹಸ್ತಾಂತರಿಸಿದ್ದು ಸಮಾಜಕ್ಕೆ ಮಾದರಿಯಾಗಿದೆ.ಶ್ರೀನಿವಾಸ ಬಿ, ದೀಪಕ್ ಪಾಟಾಜೆ, ವಿನಯ್ ಕುಮಾರ್ ಕರಿಕ್ಕಳ,ತೀರ್ಥೆಶ್ ಕೋಟೆಗುಡ್ಡೆ ಈ ವರುಷ ನಿಧಿ ಸಂಗ್ರಹಣೆಯಲ್ಲಿ ಪಾಲ್ಗೊಂಡಿದ್ದರು.