ನ.3ರಂದು ಆರಂತೋಡಿನಲ್ಲಿ ದಿl ಯು. ಡಿ. ಶೇಖರ್ ಸ್ಮರಣಾರ್ಥ ಬಸ್ ತಂಗುದಾಣ ಉದ್ಘಾಟನೆ

0

ಆರಂತೋಡು ಪದವಿ ಪೂರ್ವ ಕಾಲೇಜಿನ ಬಳಿ ದಿl ಯು. ಡಿ. ಶೇಖರ್ ಅವರ ಸ್ಮರಣಾರ್ಥ ಅವರ ಪತ್ನಿ ಗೀತಾ ಶೇಖರ್ ಮತ್ತು ಮಕ್ಕಳು ನಿರ್ಮಿಸಿದ ಪ್ರಯಾಣಿಕರ ಬಸ್ಸು ತಂಗುದಾಣವು ದಿ. ಯು.ಡಿ. ಶೇಖರ್ ಅವರ ಪ್ರಥಮ ಪುಣ್ಯಸ್ಮರಣೆಯ ದಿನವಾದ ನ.3ರಂದು ಉದ್ಘಾಟನೆಗೊಳ್ಳಲಿದೆ.

ಶಾಸಕಿ ಭಾಗೀರಥಿ ಮುರುಳ್ಯ ಅವರು ಬಸ್ಸು ತಂಗುದಾಣವನ್ನು ಉದ್ಘಾಟಿಸಲಿದ್ದು, ಊರಿನ ಗಣ್ಯರು ಉಪಸ್ಥಿತರಿರಲಿದ್ದಾರೆ.