ಪೈಲಾರು ಮಾಡಬಾಕಿಲು ಕಾಂಕ್ರೀಟ್ ರಸ್ತೆ ಶಾಸಕರಿಂದ ಉದ್ಘಾಟನೆ

0

ಅಮರಮುಡ್ನೂರು ಗ್ರಾಮದ ಪೈಲಾರು ಮಾಡಬಾಕಿಲು ಸಂಪರ್ಕದ ರಸ್ತೆಯ ಕಾಂಕ್ರೀಟ್ ಕಾಮಗಾರಿಯು ಸಂಪೂರ್ಣವಾಗಿದ್ದು ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ನ.11 ರಂದು ಉದ್ಘಾಟಿಸಿದರು.

ಮಾಜಿ ಸಚಿವ ಎಸ್.ಅಂಗಾರ ರವರ ಶಿಫಾರಸ್ಸಿನ‌ ಮೇರೆಗೆ ಈ ರಸ್ತೆ ಕಾಮಗಾರಿ‌ ಕೆಲಸಕ್ಕೆ ವಿಶೇಷ ಅನುದಾನ ರೂ.30 ಲಕ್ಷ ಬಿಡುಗಡೆಗೊಂಡಿತ್ತು. ಸುಮಾರು 470 ಮೀಟರ್ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದ್ದು ಹಾಲಿ ಶಾಸಕಿಯವರು ತೆಂಗಿನಕಾಯಿಯ ಒಡೆದು ವಾಹನ ಸಂಚಾರಕ್ಕೆ ಮುಕ್ತ ಗೊಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ
ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಪಂ.ಅಧ್ಯಕ್ಷೆ ಜಾನಕಿ‌ ಕಂದಡ್ಕ, ಉಪಾಧ್ಯಕ್ಷೆ ಭುವನೇಶ್ವರಿ ಪದವು, ಸದಸ್ಯರಾದ ಕೃಷ್ಣ ಪ್ರಸಾದ್ ಮಾಡಬಾಕಿಲು, ದಿವ್ಯ ಮಡಪ್ಪಾಡಿ, ವೆಂಕಟ್ರಮಣ ಇಟ್ಟಿಗುಂಡಿ, ಜನಾರ್ದನ ಪೈಲೂರು, ಸೊಸೈಟಿ ಅಧ್ಯಕ್ಷ ಕೇಶವ ಕರ್ಮಾಜೆ, ಮಾಜಿ ಅಧ್ಯಕ್ಷ ಸದಾಶಿವ ಗೌಡ ಮೂಕಮಲೆ, ನಿರ್ದೇಶಕ ಅರುಣ್ ಕುಮಾರ್ ನಾಯರ್ ಕಲ್ಲು, ನಿರಂಜನ್ ಕೋಡ್ತುಗುಳಿ,
ಹಿರಿಯರಾದ ಪುಟ್ಟಣ್ಣ ಗೌಡ ನಾಯರ್ ಕಲ್ಲು,ಎಂ.ಟಿ ಶಾಂತಿಮೂಲೆ, ತಿರುಮಲೇಶ್ವರ ದಂಬೆತೋಟ,
ತೇಜಸ್ವಿ ಕಡಪಳ,ಯೋಗೀಶ್
ಮಾಡಬಾಕಿಲು, ಗುತ್ತಿಗೆದಾರ ರಘು ಪ್ರಸಾದ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.