ಸುಳ್ಯ ಓಡಬಾಯಿಯಲ್ಲಿ ಶಾಲಿಮಾರ್ ಟ್ರೇಡರ್ಸ್ ಶುಭಾರಂಭ

0

ಗಾಂಧಿನಗರದ ಜಿ ಟಿ ಸಿ ಕಾಂಪ್ಲೆಕ್ಸ್ ನಲ್ಲಿ ಕಳೆದ ಸುಮಾರು ಆರು ವರ್ಷಗಳಿಂದ ಕಾರ್ಯಚರಿಸುತ್ತಿದ್ದ ಶಾಲಿಮಾರ್ ಟ್ರೇಡರ್ಸ್ ಸ್ಥಳಾಂತರಗೊಂಡು ಓಡಬಾಯಿ ಕಸ್ತೂರಿ ನರ್ಸರಿ ಮುಂಭಾಗದ ರೂಪಾ ಕಾಂಪ್ಲೆಕ್ಸ್ ನಲ್ಲಿ ನವಂಬರ್ 16ರಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಕಾವು ಬದ್ರಿಯಾ ಮಜ್ಲೀಸ್ ಇದರ ಸ್ಥಾಪಕ ಅಧ್ಯಕ್ಷ ಅಸಯ್ಯದ್ ಫಕ್ರುದ್ದೀನ್ ಹದ್ದಾದ್ ತಂಙಳ್ ದುವಾ: ನೆರವೇರಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಡಿಕೆ ಗಾರ್ಬಲ್ ಯಂತ್ರವನ್ನು ಚಾಲನೆ ಮಾಡಿ ಸಂಸ್ಥೆಯ ಶೇಖರಣಾ ಘಟಕಕ್ಕೆ ಚಾಲನೆ ನೀಡಿದರು.

ಶುಭಾರಂಭ ಸಂದರ್ಭದ ಸಂಸ್ಥೆಯ ಪ್ರಥಮ ಗ್ರಾಹಕರಾಗಿ ಡಾ. ಗೋಪಾಲಕೃಷ್ಣ ಜಾಲ್ಸೂರು ಸಹಕರಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಮಾಲಕರಾದ ಸುಂದರ್ ರಾವ್, ಸುಣ್ಣಮೂಲೆ ಜುಮಾ ಮಸೀದಿ ಖತೀಬರಾದ ಅಬ್ದುಲ್ ರಹಿಮಾನ್ ಸಕಾಫಿ, ಸದರ್ ಮುಅಲ್ಲಿಮ್ ಅಬ್ದುಲ್ ಲತೀಫ್ ಝೌಅರಿ, ಉದ್ಯಮಿ ಸಂಶುದ್ದೀನ್ ಭಾರತ್ ಶಾಮಿಯಾನ, ಉಬೈದ್ ಕದಿಕಡ್ಕ, ರಝಾಕ್ ಸಿ ಪಿ, ಹಿರಿಯರಾದ ಅಬ್ದುಲ್ ರಝಾಕ್, ಅಬ್ದುಲ್ಲಾ ಸುಣ್ಣಮೂಲೆ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಎ ಪಿ ಅಬ್ದುಲ್ ರಹೀಮ್ ಮಾತನಾಡಿ ನಮ್ಮಲ್ಲಿ ಕೃಷಿ ಉತ್ಪನ್ನಗಳಾದ ಅಡಿಕೆ, ಗೇರುಬೀಜ,ಕಾಳು ಮೆಣಸು, ತೆಂಗಿನಕಾಯಿ,ಮುಂತಾದ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ಉತ್ತಮ ದರವನ್ನು ನೀಡಿ ಖರೀದಿಸಿಕೊಳ್ಳುತ್ತೇವೆ.


ಅಲ್ಲದೆ ನಮ್ಮ ಸಂಸ್ಥೆಯಲ್ಲಿ ಗಾರ್ಬಲಿಂಗ್ ಯಂತ್ರ ಇದ್ದು ಅಡಿಕೆ ಸೈಝರ್ ಮಾಡುವ ವ್ಯವಸ್ಥೆಗಳನ್ನು ಸಂಸ್ಥೆ ಹೊಂದಿದೆ ಎಂದು ಹೇಳಿದರು.

ಸಂಸ್ಥೆಯ ಮಾಲಕರಾದ ಅಬ್ದುಲ್ ರಹಿಮಾನ್ ಎ ಪಿ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಸಹಕರಿಸಿದರು.