ಸುಳ್ಯ ತಾಲೂಕಿನ ವಿಕಲಚೇತನರಿಗೆ ಹೊಸ ಗುರುತಿನ ಚೀಟಿ ಮತ್ತು ರಿನೀವಲ್ ಮಾಡುವ ಕ್ಯಾಂಪ್

0

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸುಳ್ಯ ತಾಲೂಕಿನ ವಿಕಲಚೇತನರಿಗೆ ಹೊಸ ಗುರುತಿನ ಚೀಟಿ ಮತ್ತು ರಿನೀವಲ್ ಮಾಡುವ ಕ್ಯಾಂಪ್ ನಡೆಯಿತು. ವಿಕಲಚೇತನ ಇಲಾಖೆಯ ತಾಲೂಕು ಪಂಚಾಯತ್ ನ ಚಂದ್ರ ಶೇಖರ್. ವಿಕಲಚೇತನ ಇಲಾಖೆಯ ನಗರ ಪಂಚಾಯತ್ ನ ಪ್ರವೀಣ್ ನಾಯಕ್, ತಾಲ್ಲೂಕಿನ ಇತರ ಪಂಚಾಯತ್ ಗಳ ವಿ.ಅರ್.ಡಬ್ಲ್ಯೂರವರಾದ ಸವಿತ, ಪುಷ್ಪಶ್ರೀ, ಧರ್ಮಪಾಲ, ಪವಿತ್ರ, ಕಾವೇರಿ, ಮೀನಾಕ್ಷಿ, ಪುಟ್ಟಣ್ಣ, ಕುಸುಮವತಿ, ಉಮ್ಮರ್, ರಂಜಿನಿ, ಸದಾನಂದ, ದಿನೇಶ, ರಂಜನ್, ವೆಂಕಟ್ರಮಣ, ಹರ್ಷಿತ್, ಹರಿಣಿ. ಮತ್ತು ದಾದಿ ನಯನ ಉಪಸ್ಥಿತರಿದ್ದರು. ತಾಲೂಕು ವೈದ್ಯಾಧಿಕಾರಿ ನಂದಕುಮಾರ್, ಸಮುದಾಯದ ವೈದ್ಯಾಧಿಕಾರಿ ಡಾ.ಕರುಣಾಕರ್ ನೇತ್ರ ತ್ವದಲ್ಲಿ ಎಲುಬು ತಜ್ಞ ಪದ್ಮನಾಭ ಮತ್ತು ಇತರ ಎಲ್ಲ ವೈದ್ಯರು ಸಹಕಾರ ನೀಡಿದರು. ಎಂಡೋ ಸೇರಿದಂತೆ ಹಲವಾರು ಜನ ಇದರ ಪ್ರಯೋಜನ ಪಡೆದುಕೊಂಡರು.