ಒಡಬಾಯಿಯಲ್ಲಿ ವಾಟರ್ ವಿಂಗ್ ಟೆಕ್ನೋಲೋಜಿಸ್ ರವರ ಶಾಖೆಯ ಉದ್ಘಾಟನೆ

0

ಸುಳ್ಯ ಮುಖ್ಯ ರಸ್ತೆಯ ಒಡಬಾಯಿ ಅಗ್ನಿ ಶಾಮಕ ದಳದ ಕಚೇರಿಯ ಎದುರಿನ ಕಾಂಪ್ಲೆಕ್ಸ್ ನಲ್ಲಿ ಬಾಲಕೃಷ್ಣ ಭಟ್ ರವರ ಮಾಲಕತ್ವದ ಕೃಷಿ ಉಪಕರಣಗಳ ವಾಟರ್ ವಿಂಗ್ ಟೆಕ್ನೋಲೋಜಿಸ್ ನೂತನ ಶಾಖೆಯ ಉದ್ಘಾಟನೆಯು
ನ.26 ರಂದು ನೆರವೇರಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಸೂರ್ಯ ನಾರಾಯಣ ಭಟ್ ಪಂಜ, ಎನ್.ಬಿ.ವೆಂಕಟೇಶ್ವರ ಭಟ್, ರಾಮಕೃಷ್ಣ ಕ್ಯಾಟ್ ವಾಕ್, ವೆಂಕಟೇಶ್ವರ, ದಿನೇಶ್, ಕೇಶವ ಎಂ ಉಪಸ್ಥಿತರಿದ್ದರು. ಬಾಲಕೃಷ್ಣ ಭಟ್ ರವರು ಸ್ವಾಗತಿಸಿದರು. ಸಂಸ್ಥೆಯ ಉದ್ಯೋಗಿಗಳು ಸಹಕರಿಸಿದರು.
ಸಂಸ್ಥೆಯಲ್ಲಿ ಎಲ್ಲಾ ಬಗೆಯ ಕೃಷಿ ಉಪಕರಣಗಳ ಸೇಲ್ಸ್ ಹಾಗೂ ಸರ್ವಿಸ್ ಮಾಡಿಕೊಡಲಾಗುವುದು. ಅಲ್ಲದೆ ಉಪಕರಣಗಳ ಬಿಡಿ ಭಾಗಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ತಿಳಿಸಿದರು.