ಕೆ.ಎಫ್.ಡಿ.ಸಿ ಕಾರ್ಮಿಕರ ನಿಯೋಗದಿಂದ ಮಾಜಿ ಸಚಿವ ರಮಾನಾಥ ರೈ ಬೇಟಿ

0

ಉಳಿಕೆ ಬೋನಸ್ ಪಾವತಿಗೆ ಸರಕಾರದ ಮೇಲೆ ಒತ್ತಡ ಹಾಕಲು ಮನವಿ

ಕರ್ನಾಟಕ ಅರಣ್ಯ ಅಭಿವೃಧ್ದಿ ನಿಗಮದ ಕಾರ್ಮಿಕರಿಗೆ ಸರಕಾರದಿಂದ ಎರಡು ವರ್ಷದಿಂದ ಪಾವತಿಯಾಗದೆ ಬಾಕಿಯಾಗಿರುವ ಬೋನಸ್ ಹಣವನ್ನು ನೀಡುವರೇ ಸರಕಾರದ ಮೇಲೆ ಒತ್ತಡ ಹಾಕುವ ಬಗ್ಗೆ ಮನವಿ ಮಾಡುವುದಕ್ಕಾಗಿ ಇಂದು ಕೆ.ಪಿ.ಸಿ.ಸಿ ಸಂಯೋಜಕರಾದ ಎಸ್.ಸಂಶುದ್ದೀನ್ ನೇತೃತ್ವದಲ್ಲಿ ರಬ್ಬರ್ ಕಾರ್ಮಿಕರ ನಿಯೋಗ ಮಾಜಿ ಅರಣ್ಯ ಸಚಿವ ಬಿ.ರಮಾನಾಥ ರೈ ಯವರನ್ನು ಅವರ ನಿವಾಸದಲ್ಲಿ ಭೇಟಿಯಾಯಿತು.


ಕಾರ್ಮಿಕರ ಬೇಡಿಕೆಗೆ ಸ್ಪಂದಿಸಿದ ರಮಾನಾಥ ರೈಯವರು ಶೀಘ್ರವೇ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಯವರನ್ನು ಭೇಟಿಯಾಗಿ ಬೋನಸ್ ಹಣದ ಬಿಡುಗಡೆ ಮಾಡುವಂತೆ ಮನವರಿಕೆ ಮಾಡುವುದಾಗಿ ಭರವಸೆ ನೀಡಿದರು. ಈ ನಿಯೋಗದಲ್ಲಿ ಕಾರ್ಮಿಕ ನಾಯಕರಾದ ರಾಜಕೃಷ್ಣ ಬಿಳಿನೆಲೆ, ಲೋಕನಾಥ ಕಲ್ಲೊಣಿ, ಶಿವನ್ ಸುಬ್ರಮಣ್ಯ, ಕುಮಾರ ಕೂಟೆಲು, ಗಣೇಶ ನಾಗಪಟ್ಟಣ ಮೊದಲಾದವರು ಉಪಸ್ಥಿತರಿದ್ದರು.