ಜಿತೇಶ್ ಪೆರುವಾಜೆ ರಚಿಸಿದ ಪೆನ್ಸಿಲ್ ಕಲಾಕೃತಿ ದಿ. ಪುನೀತ್ ರಾಜ್ ಕುಟುಂಬಕ್ಕೆ ಹಸ್ತಾಂತರ

0

ಜಿತೇಶ್ ಪೆರುವಾಜೆ ರಚಿಸಿದ ದಿ. ಡಾ. ಪುನೀತ್ ರಾಜಕುಮಾರ್ ಅವರ ಪೆನ್ಸಿಲ್ ಕಲಾಕೃತಿಯನ್ನು ಮಂಗಳೂರಿನಲ್ಲಿ ನಡೆದ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾದ 20ವರ್ಷದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿ. ಡಾ.ಪುನೀತ್ ರಾಜ್ ಕುಟುಂಬಕ್ಕೆ ಹಸ್ತಾಂತರಿಸಿದರು. ಹಿರಿಯ ನಿರ್ಮಾಪಕ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಪುನೀತ್ ಅವರ ಸೋದರ ಮಾವ ಚಿನ್ನೇಗೌಡ ಜಿತೇಶ್ ಅವರು ರಚಿಸಿದ ಪುನೀತ್ ಅವರ ಪೆನ್ಸಿಲ್ ಕಲಾಕೃತಿ ಸ್ವೀಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿತೇಶ್ ಪೆರುವಾಜೆ ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ.