ಮಧುಕರ ಗೌಡ ತಂಟೆಪ್ಪಾಡಿ ಶ್ರದ್ಧಾಂಜಲಿ ಸಭೆ

0


ನ.17ರಂದು ನಿಧನರಾದ
ಕಳಂಜ ಗ್ರಾಮದ ತಂಟೆಪ್ಪಾಡಿ ಮಧುಕರ ಗೌಡರಿಗೆ ಶ್ರದ್ಧಾಂಜಲಿ ಸಭೆ ಡಿ. 3ರಂದು ಬೆಳ್ಳಾರೆಯ ಜೆ.ಡಿ. ಆಡಿಟೋರಿಯಂನಲ್ಲಿ ನಡೆಯಿತು.
ಅಮರ ಪಡ್ನೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಅಶೋಕ್ ಚೂಂತಾರು, ಸಹೋದರ ಮೇದಪ್ಪ ಗೌಡ ತಂಟೆಪ್ಪಾಡಿ, ಮಹಾಬಲ ಗೌಡ ತಂಟೆಪ್ಪಾಡಿ, ಸತೀಶ್ ನಾಯ್ಕ್ ಕಲ್ಲೇರಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ಮಹಾಬಲ ಗೌಡ ತಂಟೆಪ್ಪಾಡಿ, ಕಲ್ಲೇರಿ, ಮೃತರಿಗೆ ನುಡಿನಮನ‌ದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಮೃತರ ಪತ್ನಿ ಶ್ರೀಮತಿ ಪ್ರೇಮ, ಪುತ್ರರಾದ ತಿಲಕ್ ತಂಟೆಪ್ಪಾಡಿ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ದೀಪಕ್ ತಂಟೆಪ್ಪಾಡಿ, ಸೊಸೆ ಶ್ರೀಮತಿ ಚಿತ್ರಕಲಾ‌ ತಿಲಕ್ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.