ಅಂತಾರಾಜ್ಯ ಮಟ್ಟದ ಕವಿತಾ ವಾಚನ ಸ್ಪರ್ಧೆಯಲ್ಲಿ ವಸುಂಧರಾ ಡಿ.ಎಂ. ಪ್ರಥಮ

0

ಪರಂಪರಾ ಕಲ್ಚರಲ್ ಫೌಂಡೇಶನ್ ಬೆಂಗಳೂರು ಇದರ ವತಿಯಿಂದ ನಡೆದ ಅಂತಾರಾಜ್ಯ ಮಟ್ಟದ ಕನ್ನಡ ಕವಿತೆಗಳ ವಾಚನ ಸ್ಪರ್ಧೆಯಲ್ಲಿ ಮಂಗಳೂರಿನ ಚಿನ್ಮಯ ಪ್ರೌಢಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಕು.ವಸುಂಧರಾ ಡಿ.ಎಂ. ಪ್ರಥಮ ಬಹುಮಾನ ಪಡೆದಿದ್ದಾರೆ.

ನ.25 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಿತು. ವಸುಂಧರಾ ಮಂಗಳೂರಿನಲ್ಲಿ ಉಪ ವಲಯಾರಣ್ಯಾಧಿಕಾರಿಯಾಗಿರುವ ಮಹಾಬಲ ಅರಂತೋಡು ಮತ್ತು ಶ್ರೀಮತಿ ಜಯಲಕ್ಷ್ಮಿ ಮಹಾಬಲ ದಂಪತಿಯ ಪುತ್ರಿ.