ಸುಬ್ರಹ್ಮಣ್ಯ: ವಸತಿ ಗೃಹದಲ್ಲಿ ಸಿಕ್ಕಿದ ಮಾಂಗಲ್ಯ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಮಾಲಕ

0

ಸುಬ್ರಹ್ಮಣ್ಯ ಕಾವೇರಿ ವಸತಿ ಗೃಹಕ್ಕೆ ಡಿ.9 ರಂದು ಮೈಸೂರು ಭಾಗದ ಯಾತ್ರಾರ್ಥಿಗಳು ಬಂದಿದ್ದು, ಡಿ.10 ರಂದು ತೆರಳಿದ್ದರು.‌

ಅವರು ಖಾಲಿ ಮಾಡಿ ಹೋಗಿದ್ದ ರೂಮ್ ನಲ್ಲಿ 5 ಲಕ್ಷ ಬೆಲೆ ಬಾಳುವ ಮಾಂಗಲ್ಯ ಸರವೊಂದು ಲಾಡ್ಜ್ ಮಾಲಕ ನಾಣಯ್ಯ ಏ.ಕೆ. ಅವರಿಗೆ ದೊರಕಿತ್ತು. ಅವರು ಅದನ್ನು ಪ್ರಾಮಾಣಿಕತೆಯಿಂದ ಸುಬ್ರಹ್ಮಣ್ಯ ಠಾಣೆ ಮುಖಾಂತರ ವಾರಸುದಾರರಾದ ಮಂಜುನಾಥ ಅವರಿಗೆ ಹಸ್ತಾಂತರಿಸಿದ್ದಾರೆ.‌

ಸರ ಮಂಜುನಾಥ್ ಅವರ ಪತ್ನಿಯದ್ದಾಗಿದ್ದು, ಸರ ಹಸ್ತಾಂತರ ಸಂದರ್ಭ ಎಸ್ ಐ ಕಾರ್ತಿಕ್, ನಿವೃತ್ತ ಪ್ರಾಧ್ಯಾಪಕ ತಿಲಕ್ ಎ ಎ, ಮಹೇಶ್ ಕೂರ್ಗ್ ಉಪಸ್ಥಿತರಿದ್ದರು.