ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕೂಜುಗೋಡು ಕುಟುಂಬಸ್ಥರಿಂದ ಹೊರ ಕಾಣಿಕೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಪ್ರತಿವರ್ಷದಂತೆ ಕೂಜುಗೋಡು ಮನೆತನದವರು ಈ ವರ್ಷ ಕೂಡ ಹೊರೆ ಕಾಣಿಕೆಯನ್ನು ಇಡೀ ಕುಟುಂಬಸ್ಥರು ಸೇರಿ ಡಿ.16 ತಂದು ದೇವಳಕ್ಕೆ ಅರ್ಪಿಸಿದ್ದಾರೆ. ಹೊರೆ ಕಾಣಿಕೆ ತರುವ ಸಂದರ್ಭದಲ್ಲಿ ಕೂಜುಗೋಡು ಕುಟುಂಬಸ್ಥರ ಮುಖ್ಯಸ್ಥರಾದ ಕಿಶೋರ್ ಕುಮಾರ್ ಕೂಜುಗೋಡು ,ಸೋಮಸುಂದರ ಕೂಜುಗೋಡು ,ಜಯಪ್ರಕಾಶ್ ಕೂಜುಗೋಡು ,ಸತೀಶ ಕೂಜುಗೋಡು , ಮತ್ತಿತರರು ನೇತೃತ್ವ ವಹಿಸಿದ್ದರು.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸದಲ್ಲಿ ಕೂಜುಗೋಡು ಮನೆತನಕ್ಕೆ ವಿಶೇಷವಾದಂತಹ ಸ್ಥಾನಮಾನ ಇದ್ದು ಅನುವಂಶಿಕ ಆಡಳಿತ ಟ್ರಸ್ಟಿ ಅಧ್ಯಕ್ಷರಾಗಿ ಹಲವಾರು ವರ್ಷಗಳಿಂದ ಕೂಜುಗೋಡು ದಿವಂಗತ .ಸುಬ್ರಮಣ್ಯಗೌಡರು ಆಡಳಿತ ನಡೆಸುತ್ತಿದ್ದುದನ್ನ ಈ ಸಂದರ್ಭದಲ್ಲಿ ಗಮನಿಸಬಹುದಾಗಿದೆ.