ಸುಳ್ಯಕ್ಕೆ ಆಗಮಿಸಿದ ಹನುಮ ರಥ : ಭವ್ಯ ಸ್ವಾಗತ

0

ನಮೋ ಬ್ರಿಗೇಡ್2.0 ರಾಜ್ಯದ್ಯಂತ ಸಂಚರಿಸುತ್ತಿರುವ ಹನುಮ ರಥ ಯಾತ್ರೆ ಇಂದು ಸುಳ್ಯಕ್ಕೆ ಆಗಮಿಸಿತ್ತು.

ಶ್ರೀ ಚನ್ನಕೇಶವ ದೇವಸ್ಥಾನದ ವಠಾರದಲ್ಲಿ ಸುಳ್ಯದ ನಮೋ ಬ್ರಿಗೇಡ್ ಕಾರ್ಯಕರ್ತರು ಸ್ವಾಗತಿಸಿದರು. ಸುಳ್ಯದ ಶಾಸಕರಾದ ಭಾಗೀರಥಿ ಮುರುಳ್ಯ ಹನುಮನ ಮೂರ್ತಿಗೆ ಹಾರರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ಸುಭೋದ್ ಶೆಟ್ಟಿ ಮೇನಾಲ, ಚನಿಯ ಕಲ್ತಡ್ಕ, ಮಹೇಶ್ ರೈ ಮೇನಾಲ ನಮೋ ಬ್ರಿಗೇಡ್ ನ ಕಾರ್ಯಕರ್ತರಾದ ಚಿದಾನಂದ ಪರಿವಾರ ,ಲೋಕೇಶ್ ಕೆರೆಮೂಲೆ, ಪ್ರಶಾಂತ ಕೂತಮೊಟ್ಟೆ , ನವೀನ್ , ವಿನಯ್ ನಾರಾಲು,ಸತೀಶ್ ಕಾಟೂರು ಉಪಸ್ಥಿತರಿದ್ದರು.