ಅರಂತೋಡು : ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಧ್ವಜ ದಿನ ಕಾರ್ಯಕ್ರಮ

0

ಬೆಂಗಳೂರಿನಲ್ಲಿ ಜ.28ರಂದು ಸಮಸ್ತ 100ನೇ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭ ಪ್ರಯುಕ್ತ ಧ್ವಜದಿನ ಕಾರ್ಯಕ್ರಮವು ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ ಅರಂತೋಡು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಜ.19ರಂದು ನಡೆಯಿತು. ಖತೀಬರಾದ ಬಹು ಅಲ್‌ಹಾಜ್ ಇಸಾಕ್ ಬಾಖವಿ ಅಗಲಿದ ಸಮಸ್ತ ನೇತಾರರಿಗೆ ದುವಾ ನೆರವೇರಿಸಿದರು.

ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಮಾಅತ್ ಉಪಾಧ್ಯಕ್ಷ ಹಾಜಿ ಕೆ ಎಂ ಮಹಮ್ಮದ್, ಶಾಫಿ ಮುಸ್ಲಿಯಾರ್, ಬಿಳಿಯಾರು ಮಸೀದಿಯ ಸಂಶುದ್ದೀನ್ ಮುಸ್ಲಿಯಾರ್, ಮಾಜಿ ಅಧ್ಯಕ್ಷರಾದ ಹಾಜಿ ಅಹ್ಮದ್‌ಕುಂಞ ಪಟೇಲ್, ಅಬ್ದುಲ್ ಖಾದರ್ ಪಟೇಲ್, ಹಾಜಿ ಎಸ್ ಇ ಮಹಮ್ಮದ್, ಹಾಜಿ ಟಿ ಎಂ ಬಾಬಾ ತೆಕ್ಕಿಲ್ , ಎ ಹನೀಫ್, ಅಮೀರ್ ಕುಕ್ಕುಂಬಳ, ಸಂಶುದ್ದೀನ್ ಪೆಲ್ತಡ್ಕ, ಕೆ ಎಂ ಮೊಯಿದು ಕುಕ್ಕುಂಬಳ, ಹಾಜಿ ಅಝರುದ್ದೀನ್, ಎ ಇ ಮುಸ್ತಫಾ, ಎ ಉಮ್ಮರ್, ಜವಾದ್ ಪಾರೆಕ್ಕಲ್, ರಜಾಕ್ ಅಡಿಮರಡ್ಕ, ಟಿ ಕೆ ಮೊಹ್ಮದ್, ಹಮೀದ್ ಅಡಿಮರಡ್ಕ, ನವಾಝ್, ಪಸೀಲು, ಹಮೀದ್ ಬಿಳಿಯಾರ್, ಲತೀಫ್ ಮೊಟ್ಟೆಂಗಾರ್, ಮಾಹಿನ್ ಸಂಟ್ಯಾರ್, ಇಕ್ಬಾಲ್, ಮುಜೀಬ್ ಅರಂತೋಡು, ಬಾತಿಷ ಕುಕ್ಕುಂಬಳ, ಅದನಾನ್ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.