ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನವೀಕೃತ ರಕ್ತ ಕೇಂದ್ರ ಉದ್ಘಾಟನೆ

0

ಸುಳ್ಯದ ಕೆ.ವಿ.ಜಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಇಲ್ಲಿ ನವೀಕೃತಗೊಳಿಸಿದ ರಕ್ತ ಕೇಂದ್ರವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ। ಕೆ.ವಿ. ಚಿದಾನಂದ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಶೋಭಾ ಚಿದಾನಂದ ಉಪಾಧ್ಯಕ್ಷರು, ಜಗದೀಶ್ ಅಡ್ತಲೆ, ಡೀನ್ ನೀಲಾಂಬಿಕೈ ನಟರಾಜನ್, ಡಾ| ವಿಶುಕುಮಾರ್, ಡಾ| ಸಿ. ಆರ್. ಭಟ್, ಡಾ। ಸುಬ್ರಹ್ಮಣ್ಯ, ಡಾ। ಸತ್ಯವತಿ ಆಳ್ವ, ಡಾ। ಗೀತಾದೊಪ್ಪ, ಡಾ। ಶ್ರೀ ಕಾಂತೆ ಗೌಡ, ಡಾ| ಪ್ರಕಾಶ್ ರಾವ್, ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಡಾ| ನವ್ಯ, ಉಪಸ್ಥಿತರಿದ್ದರು,