ಪಂಜ : ಯಕ್ಷಗಾನ ಬಯಲಾಟ-ಕಲಾವಿದ ಗುಡ್ಡಪ್ಪ ಸುವರ್ಣ ಪಂಜ ರವರಿಗೆ ಸನ್ಮಾನ

0

ಯಕ್ಷ ಮಿತ್ರರು ಪಂಜ ಇದರ ಆಶ್ರಯದಲ್ಲಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಫೆ.1ರಂದು ದೇಗುಲದ ರಥಬೀದಿಯಲ್ಲಿ ಮಂಗಳೂರು ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ರವರಿಂದ “ಮುಗುರು ಮಲ್ಲಿಗೆ” ಎಂಬ ತುಳು‌ ಹಾಸ್ಯಮಯ ಯಕ್ಷಗಾನ ಪ್ರದರ್ಶನ ನಡೆಯಿತು.

ಇದೇ ವೇಳೆ ಸುಧೀರ್ಘ 35 ವರ್ಷಗಳ ಕಲಾಸೇವೆಯನ್ನು ಗುರುತಿಸಿ ಯಕ್ಷಗಾನ ಕಲಾವಿದ ಗುಡ್ಡಪ್ಪ ಸುವರ್ಣ ಪಂಜ ರವರನ್ನು ಯಕ್ಷ ಮಿತ್ರರು ಪಂಜ ಇದರ ವತಿಯಿಂದ ಸನ್ಮಾನಿಸಲಾಯಿತು.
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ಸನ್ಮಾನಿದರು ,ರಾಜ್ಯ ಭಜನಾ ಪರಿಷತ್‌ ಅಧ್ಯಕ್ಷ ಬಾಲಕೃಷ್ಣ ಪುತ್ಯ, ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲ್ ಗುತ್ತು ,ಯಕ್ಷ ಮಿತ್ರ ಪಂಜ ಇದರ ಸದಸ್ಯ ಪುರುಷೋತ್ತಮ ಆಚಾರ್ಯ ನಾಗತೀರ್ಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು ಜಯರಾಮ ಕಲ್ಲಾಜೆ ವಂದಿಸಿದರು.