ಸುಳ್ಯ ಕಸಬಾಮೂಲೆ ಶ್ರೀ ಸಂಚಾರಿ ಗುಳಿಗ ದೈವದ ನೇಮೋತ್ಸವ

0

ಸುಳ್ಯ ಕಸಬಾಮೂಲೆ ಶ್ರೀ ಸಂಚಾರಿ ಗುಳಿಗ ದೈವದ ನೇಮೋತ್ಸವವು ಫೆ.17 ರಂದು ನಡೆಯಿತು. ಬೆಳಿಗ್ಗೆ ಗಣಹೋಮ ನಡೆಯಿತು. ಸಂಜೆ ಭಂಡಾರ ತೆಗೆಯಲಾಯಿತು.ನಂತರ ದೈವಕ್ಕೆ ಎಣ್ಣೆ ವೀಳ್ಯ ನೀಡಲಾಯಿತು.ಬಳಿಕ ಶ್ರೀ ದೈವದ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಸಂಚಾರಿ ಗುಳಿಗ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಸಂಕಪ್ಪ ಗೌಡ ನೀರ್ಪಾಡಿ, ಅಧ್ಯಕ್ಷ ರಘುನಾಥ ಶೆಟ್ಟಿ,ಉಪಾಧ್ಯಕ್ಷ ನೋಣಪ್ಪ ಗೌಡ ಕಲ್ಕುದಿ,ಕಾರ್ಯದರ್ಶಿ ಮುರಳಿ ಮಾವಂಜಿ,ಜತೆ ಕಾರ್ಯದರ್ಶಿ ಲವಕುಮಾರ್ ಕನ್ನಡ್ಕ,ಕೋಶಾಧಿಕಾರಿ ಮಹಾಲಿಂಗನ್ ಬಾಜರ್ ತ್ತೊಟ್ಟಿ,ನಿರ್ದೇಶಕರಾದ ದಿನೇಶ್ ಕುಮಾರ್ ಕೆ.ಸಿ,ಸನತ್ ರಾಮಚಂದ್ರ,ರಾಮಚಂದ್ರ ಭಟ್ ಹಾಗೂ ಗೌರವ ಸಲಹೆಗಾರರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.