ಐನೆಕಿದು: ಕತ್ತಿಮಜಲ್, ಕೆದಿಲದಲ್ಲಿ ಸೇತುವೆ ಉದ್ಘಾಟನೆ

0

ಐನೆಕಿದು ಗ್ರಾಮದ ಕತ್ತಿಮಜಲ್ ಸೇತುವೆಯನ್ನು ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ಮಾ.10 ರಂದು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತಾ ಕಲ್ಲಾಜೆ, ಉಪಾಧ್ಯಕ್ಷ ವೆಂಕಟೇಶ್ ಎಚ್.ಎಲ್, ಬಿಜೆಪಿ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಪಂಚಾಯತ್ ಸದಸ್ಯರಾದ ಗಿರೀಶ್ ಪೈಲಾಜೆ, ಲಲಿತಾ ಗುಂಡಡ್ಕ , ಭಾರತಿ ಬಿ.ಏನ್, ಜಯಪ್ರಕಾಶ್ ಕೂಜುಗೋಡು,ಕಿಶೋರ್ ಕುಮಾರ್ ಕೂಜುಗೋಡು , ಬಿಜೆಪಿ ಪಕ್ಷದ ಕಾರ್ಯಕರ್ತರು, ಫಲಾನುಭವಿಗಳು ಉಪಸ್ಥಿತರಿದ್ದರು.

ಇದೇ ದಿನ
ಕೆದಿಲ ದಲ್ಲಿ 5 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು/ಸೇತುವೆಯನ್ನು ಉದ್ಘಾಟಿಸಲಾಯಿತು.