ಬಿದ್ದು ಸಿಕ್ಕಿದ್ದ ಚಿನ್ನದ ತಾಳಿ ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ

0

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಚಿನ್ನದ ತಾಳಿವೊಂದು ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ ವಿಜಯ ಕುಮಾರ್ ಎಂಬವರಿಗೆ ಬಿದ್ದು ಸಿಕ್ಕಿದ್ದು, ಅದನ್ನು ಅವರು ಸುಳ್ಯ ಸುದ್ದಿ ಕಚೇರಿಗೆ ತಂದು ಕೊಟ್ಟಿದ್ದರು. ಈ ಬಗ್ಗೆ ಸುದ್ದಿ ವೆಬ್ಸೈಟ್ ನಲ್ಲಿ ಮೇ. 2 ರಂದು ವರದಿ ಪ್ರಕಟಿಸಲಾಗಿತ್ತು.

ವರದಿ ಬಿತ್ತರಗೊಳ್ಳುತಿದ್ದಂತೆ ತಾಳಿ ಕಳೆದುಕೊಂಡ ಮಹಿಳೆ ಶ್ರೀಮತಿ ನಿಶಾ ಚಂದನ್ ರವರು ಸುಳ್ಯ ಸುದ್ದಿ ಬಿಡುಗಡೆ ಕಚೇರಿಗೆ ಬಂದು ಚಿನ್ನದ ತಾಳಿಯ ಗುರುತು ಹೇಳಿ ಪಡೆದುಕೊಂಡರು. ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆಯವರು ಹಸ್ತಾಂತರಿಸಿದರು.