ಸುಬ್ರಹ್ಮಣ್ಯ: ಭಕ್ತರ ನೂಕುನುಗ್ಗಲು, ಕೆ.ಎಸ್.ಆರ್.ಟಿ.ಸಿ ತಂಗುದಾಣದಲ್ಲಿ ಹೊಡೆದಾಟ

0

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ತಂಗುದಾಣದಲ್ಲಿ ಇಂದು ಪ್ರಯಾಣಿಕರ ಮಧ್ಯೆ ಸೀಟಿನ ವಿಚಾರವಾಗಿ ಹೊಡೆದಾಟವೇ ನಡೆದು ಹೋಗಿರುವುದಾಗಿ ತಿಳಿದು ಬಂದಿದೆ.

ದೂರದೂರಿಗೆ ಬರುವ ಬಸ್ ಗಳು ತಂಬಿ ತುಳುಕುತಿದ್ದು, ಬಸ್ಸು ಬಂದು ನಿಂತ ತಕ್ಷಣ ಬಸ್ ಹತ್ತಲು ನೂರಕ್ಕೂ ಅಧಿಕ ಮಂದಿ ಬಸ್ ನ ಸುತ್ತುವರಿಯುವುದು ಕಂಡು ಬರುತ್ತಿದೆ.