ಮೊಗರ್ಪಣೆ: ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾ ಪಲ್ಟಿ, ಚಾಲಕ ಅಪಾಯದಿಂದ ಪಾರು

0

ಮೊಗರ್ಪಣೆ ಸೇತುವೆ ಬಳಿ ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿ ಪಲ್ಟಿ ಯಾಗಿದ್ದು ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಮೇ 29 ರಂದು ರಾತ್ರಿ ನಡೆದಿದೆ.


ಜಯನಗರ ನಿವಾಸಿ ರಾಧಾಕೃಷ್ಣ ಎಂಬುವರು ಸುಳ್ಯದಿಂದ ಜಯನಗರಕ್ಕೆ ಬರುತ್ತಿದ್ದ ಸಂದರ್ಭ ಮೊಗರ್ಪಣೆ ಸೇತುವೆ ಬಳಿ ನಿಯಂತ್ರಣ ತಪ್ಪಿ ಆಟೋರಿಕ್ಷಾ ನಡು ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ವೇಳೆ ಬೇರೆ ಯಾವುದೇ ವಾಹನಗಳು ಬಾರದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ತಕ್ಷಣ ಸ್ಥಳೀಯರು ಬಂದು ಆಟೋರಿಕ್ಷವನ್ನು ಎತ್ತಿ ಸರಿಪಡಿಸಿ ಸಹಕರಿಸಿದರು.