ಬಿಜೆಪಿ ಬೂತ್ ಕಾರ್ಯಕರ್ತರಿಗೆ ಅಭಿನಂದನಾ ಸಭೆ

0

ಭಾರತೀಯ ಜನತಾ ಪಾರ್ಟಿ ಕಾಯರ್ತೋಡಿ ಬೂತಿನ ಕಾರ್ಯಕರ್ತರಿಗೆ ಅಭಿನಂದನಾ ಸಭೆಯು ಮೇ. ೩೦ರಂದು ಹಿಮಕರ ಕುದ್ಪಾಜೆಯವರ ಮನೆಯಲ್ಲಿ ನಡೆಯಿತು.

ಎ.೨೬ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಬೂತ್ ಸಮಿತಿ ಅಧ್ಯಕ್ಷರಾದ ವಿಜಯ ದೇಂಗೋಡಿ ವಹಿಸಿದ್ದರು. ಹಿರಿಯ ಕಾರ್ಯಕರ್ತ ಪಿ.ಕೆ ಉಮೇಶ್ ಸಂಘಟನೆ ನಡೆದು ಬಂದ ದಾರಿಯ ಬಗ್ಗೆ ತಿಳಿಸಿದರು.

ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ. ಟಿ ಸಂಘಟನೆಯನ್ನು ಬಲಪಡಿಸುವ ಮಾರ್ಗೋಪಾಯ ತಿಳಿಸಿ, ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದರು. ಬೂತ್ ಕಾರ್ಯದರ್ಶಿ ದೀಪಕ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.