ಸುಬ್ರಹ್ಮಣ್ಯ: ಮಳೆ ನೀರು ಚರಂಡಿಯಲ್ಲಿ ಹರಿಯದೆ, ಗ್ರಾ.ಪಂ ಸದಸ್ಯರ ಮನೆ ಅಂಗಳಕ್ಕೆ

0

ಸುಬ್ರಹ್ಮಣ್ಯದ ಪೇಟೆಯಲ್ಲಿ ಮೇ.30 ರ ಸಂಜೆ ಸುರಿದ ಭಾರೀ ಮಳೆಗೆ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರೊಬ್ಬರ ಮನೆ ಅಂಗಳಕ್ಕೆ ನೀರು ಹರಿದ ಘಟನೆ ವರದಿಯಾಗಿದೆ.

ಬೈಪಾಸ್ ರಸ್ತೆಯ ತುಂಬಾ ಹರಿದ ಮಳೆ ನೀರು ಚರಂಡಿಯಲ್ಲಿ ಹೋಗದೆ ಗ್ರಾ.ಪಂ ಸದಸ್ಯ ರಾಜೇಶ್ ಎನ್.ಎಸ್ ಅವರ ಮನೆ ಕಡೆ ಹರಿದು ಕಸ, ಕಡ್ಡಿ ಮನೆಯ ಅಂಗಳದಲ್ಲಿ ತುಂಬಿದೆ. ಮಳೆಗಾಲ ಆರಂಭದಲ್ಲಿ ಹೀಗಾದರೆ ಮುಂದಿನ ದಿನಗಳಲ್ಲಿ ಹೇಗೆ ಎನ್ನುವ ಪ್ರಶ್ನೆ ಎದ್ದಿದ್ದು ಸಂಬಂಧಿಸಿದವರು ಸಮಸ್ಯೆ ಸ್ಪಂದಿಸಿ ಬಗೆ ಹರಿಸಬೇಕು ಎಂದವರು ಆಗ್ರಹಿಸಿದ್ದಾರೆ.