ಸುಳ್ಯದ ಅಂಬಟೆಡ್ಕದಲ್ಲಿ ಬಿಜೆಪಿ ಕಚೇರಿ ಗಣಪತಿ ಹವನದೊಂದಿಗೆ ಶುಭಾರಂಭ

0


ಸುಳ್ಯದ ಅಂಬೆಟಡ್ಕದಲ್ಲಿರುವ ಅಟಲ್ ಜಿ ಚಾರಿಟೇಬಲ್ ಟ್ರಸ್ಟ್ ಕಟ್ಟಡದಲ್ಲಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ನೂತನ ಕಛೇರಿಯು ಇಂದು ಶ್ರೀ ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು.


ಪುರೋಹಿತ ನಟರಾಜ ಶರ್ಮರ ಪೌರೋಹಿತ್ಯದಲ್ಲಿ ಗಣಪತಿ ಹವನ ನಡೆಯಿತು. ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ದಂಪತಿಗಳು ಪೂಜಾ ಕಾರ್ಯ ನೆರವೇರಿತು.


ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಎಸ್.ಎನ್. ಮನ್ಮಥ, ವೆಂಕಟ್ ದಂಬೆಕೋಡಿ, ರಾಕೇಶ್ ರೈ ಕೆಡೆಂಜಿ, ಮಧುಸೂದನ್ ಕುಂಭಕ್ಕೋಡು, ಶ್ರೀಮತಿ ಲತಾ ಮಧುಸೂದನ್, ಸುಧಾಕರ ಕಾಮತ್ ವಿನೋಬಾನಗರ, ಎ.ವಿ.ತೀರ್ಥರಾಮ, ಕೃಷ್ಣ ಶೆಟ್ಟಿ ಕಡಬ, ಸುಬೋಧ್ ಶೆಟ್ಟಿ ಮೇನಾಲ, ಮುಳಿಯ ಕೇಶವ ಭಟ್, ಆಶಾ ತಿಮ್ಮಪ್ಪ,

ಜಯರಾಮ ರೈ ಜಾಲ್ಸೂರು, ವಿನಯಕುಮಾರ್ ಮುಳುಗಾಡು, ವಿಕ್ರಂ ಅಡ್ಪಂಗಾಯ, ಚನಿಯ ಕಲ್ತಡ್ಕ, ಸುನಿಲ್ ಕೇರ್ಪಳ, ಜಗದೀಶ್ ಸರಳಿಕುಂಜ, ಅಶೋಕ ಅಡ್ಕಾರು, ಶ್ರೀಪತಿ ಭಟ್ ಮಜಿಗುಂಡಿ, ಕರುಣಾಕರ ಹಾಸ್ಪಾರೆ, ಪಿ.ಕೆ. ಉಮೇಶ್, ಸೋಮನಾಥ ಪೂಜಾರಿ, ಡಾ. ಮನೋಜ್ ಅಡ್ಡಂತ್ತಡ್ಕ, ಚಂದ್ರಶೇಖರ ನೆಡಿಲು, ಪ್ರಸಾದ್ ಕಾಟೂರು, ಶೀಲಾ ಕುರುಂಜಿ ಮೊದಲಾದವರಿದ್ದರು.