ಕುಕ್ಕನ್ನೂರು ಶ್ರೀ ಕಿನ್ನಿಮಾಣಿ – ಪೂಮಾಣಿ ನೂತನ ಸೇವಾ ಸಮಿತಿ ರಚನೆ

0

ಅಸೌಖ್ಯದಿಂದಿರುವ ಅಚಿಂತ್ಯನ ಚಿಕಿತ್ಸೆಗೆ ಆರೋಗ್ಯ ನಿಧಿ ಧನಸಹಾಯ ಹಸ್ತಾಂತರ

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ – ಪೂಮಾಣಿ ದೈವಸ್ಥಾನದ ನೂತನ ಸೇವಾ ಸಮಿತಿಯನ್ನು ಮೇ.26ರಂದು ರಚಿಸಲಾಗಿದ್ದು, ಅಸೌಖ್ಯದಿಂದಿರುವ ಕುಕ್ಕಂದೂರಿನ ವೆಂಕಟ್ರಮಣ ಖಂಡಿಗೆ ಅವರ ಪುತ್ರ ಅಚಿಂತ್ಯನ ಚಿಕಿತ್ಸೆಗಾಗಿ ಆರೋಗ್ಯ ನಿಧಿ ಧನಸಹಾಯವನ್ನು ಹಸ್ತಾಂತರಿಸಲಾಯಿತು.

2024-25 ನೇ ಸಾಲಿನ ನೂತನ ಶ್ರೀ ಕಿನ್ನಿಮಾಣಿ ಪೂಮಣಿ ಸೇವಾ ಸಮಿತಿಯ ಅಧ್ಯಕ್ಷರಾಗಿ ಗಿರೀಶ್ ಎಸ್. ನಾಯಕ್, ಕಾರ್ಯದರ್ಶಿಯಾಗಿ ಸುಧೀರ್ ರೈ ಕುಕ್ಕನ್ನೂರು, ಕೋಶಾಧಿಕಾರಿಯಾಗಿ ಗಣೇಶ್ ರೈ ಕುಕ್ಕನ್ನೂರು ಹಾಗೂ ಸಹಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಅಸೌಖ್ಯದಿಂದ ಬಳಲುತ್ತಿರುವ ಕುಕ್ಕಂದೂರಿನ ವೆಂಕಟ್ರಮಣ ಖಂಡಿಗೆ ಅವರ ಪುತ್ರ ಅಂಚಿಂತ್ಯ ಅವರ ಚಿಕಿತ್ಸೆಗೆ ಅರೋಗ್ಯ ನಿಧಿಯಾಗಿ ಊರಿನವರು ಮತ್ತು ಸಮಿತಿ ಸದಸ್ಯರು ಒಟ್ಟು ಮೊತ್ತ ಮೂವತ್ತು ಸಾವಿರವನ್ನು ಉಳ್ಳಾಕುಲು ದೈವಸ್ಥಾನದಲ್ಲಿ ದೈವಗಳ ಅನುಗ್ರಹ ಕೋರಿ ಪ್ರಾರ್ಥನೆ ಮಾಡುವ ಮೂಲಕ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ನಡುಬೆಟ್ಟು ಮತ್ತು ದಾನಿಗಳು ಸೇರಿ ನಗದು ರೂಪದಲ್ಲಿ ವೆಂಕಟ್ರಮಣ ಖಂಡಿಗೆ ಅವರಿಗೆ ಹಸ್ತಾಂತರಿಸಲಾಯಿತು.