ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರ ಗೆಲುವು

0

ಐವರ್ನಾಡಿನಲ್ಲಿ ಬಿ ಜೆ ಪಿ ಕಾರ್ಯಕರ್ತರಿಂದ ಸಿಹಿ ಹಂಚಿ ಸಂಭ್ರಮ

ಐವರ್ನಾಡಿನಲ್ಲಿ ಬಿಜೆಪಿಗೆ 1,000 ಕ್ಕಿಂತ ಹೆಚ್ಚು ಲೀಡ್ ಬಂದಿದೆ : ಎಸ್.ಎನ್.ಮನ್ಮಥ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟವರು ಅಭೂತಪೂರ್ವ ಗೆಲುವು ಸಾಧಿಸಿದ್ದು ಜೂ.05 ರಂದು ಐವರ್ನಾಡಿನಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.


ಡಿ.ಸಿ.ಸಿ‌ ಬ್ಯಾಂಕ್ ನಿರ್ದೇಶಕ ಹಾಗು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಮಾತನಾಡಿ ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರವರು ಹೆಚ್ಚು ಮತಗಳಿಂದ ವಿಜಯ ಸಾಧಿಸಿದ್ದಾರೆ.
ಐವರ್ನಾಡಿನಲ್ಲಿ ಬಿಜೆಪಿಗೆ 1,000 ಕ್ಕಿಂತಲೂ ಹೆಚ್ಚು ಮತ ಬಂದಿದೆ.
ಮತದಾರರು ಅಮೂಲ್ಯವಾದ ಮತವನ್ನು ನೀಡಿ ಆಶೀರ್ವಾದಿಸಿದ್ದಾರೆ.


ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಲಿದ್ದಾರೆ.
ಮತ ನೀಡಿ ಸಹಕರಿಸಿದ ಐವರ್ನಾಡು ಗ್ರಾಮದ ಮತ್ತು ಎಲ್ಲಾ ಮತದಾರರಿಗೆ ಕೃತಜ್ಞತೆ ಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಸಹಕಾರಿ ಸಂಘದ ನಿರ್ದೇಶಕರಾದ ಸತೀಶ್ ಎಡಮಲೆ, ಪುರಂದರ ಶಾಂತಿಮೂಲೆ, ಲಕ್ಷ್ಮಣ ಗೌಡ ಶಾಂತಮೂಲೆ, ಮಹೇಶ ಜಬಳೆ, ಕೃಷ್ಣ ಬೆಳ್ಚಪ್ಪಾಡ, ಹಿರಿಯರಾದ ಮಾಧವ ಭಟ್ ಶೃಂಗೇರಿ, ಶರತ್ ಜಬಳೆ, ಶೇಖರ ಮಡ್ತಿಲ, ವಿನಯ ಕೋಡ್ತೀಲು,ಸತ್ಯನಾರಾಯಣ ಅಚ್ರಪ್ಪಾಡಿ,ಗ್ರಾ.ಪಂ.ಸದಸ್ಯರಾದ ದೇವಿಪ್ರಸಾದ್ ಎನ್.ಎಸ್. ರಂಜನ್ ಮೂಲೆತೋಟ,ಸುಜಾತ ಪವಿತ್ರಮಜಲು, ಶಾಂತರಾಮ ಕಣಿಲೆಗುಂಡಿ,
ವಿಕ್ರಂ ಕೊಯಿಲ,ವಿಶ್ವನಾಥ, ರಾಮಚಂದ್ರ,ರೋಹಿತ್ ಬಾಂಜಿಕೋಡಿ,ರವೀಂದ್ರ ಮಡ್ತಿಲ,ಚೈತ್ರ ಶಿವಪ್ರಸಾದ್ ಕಟ್ಟತ್ತಾರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.