ಬಟ್ಯಪ್ಪ ಮಣಿಯಾಣಿ ಕಣೆಮರಡ್ಕ ನಿಧನ

0

ಮಂಡೆಕೋಲು ಗ್ರಾಮದ ಬಟ್ಯಪ್ಪ ಮಣಿಯಾಣಿ ಕಣೆಮಡ್ಕರವರು ಅಲ್ಪ ಕಾಲದ ಅಸೌಖ್ಯದಿಂದ ಜೂನ್ 6ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರಿಗೆ 85ವರ್ಷ ವಯಸ್ಸಾಗಿದ್ದು ಮೃತರು ಪತ್ನಿ ಸರಸ್ವತಿ, ಪುತ್ರರಾದ ಪೂರ್ಣಚಂದ್ರ, ಶೇಖರ, ಶಿವಪ್ರಸಾದ್, ಪುತ್ರಿಯರಾದ ಪುಷ್ಪವತಿ, ಅನಿತಾ, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ. ಇವರು ಶ್ರೀ ಮಹಾವಿಷ್ಣು ದೈವಸ್ಥಾನ ಮಂಡೆಕೋಲು ಇದರ ಸೇವಾ ಸಮಿತಿಯ ಗೌರವ ಅಧ್ಯಕ್ಷರಾಗಿ, ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಗೌರವ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ.