ಸುಳ್ಯ ಎನ್ನೆಂಪಿಯುಸಿಯಲ್ಲಿ ಜೀವನ ಕೌಶಲ್ಯ ತರಬೇತಿ

0

ಸ್ವ ಶಿಸ್ತು, ಸಮಯ ನಿರ್ವಹಣೆ,ನೀತಿ -ನಿಯಮಗಳು,ಒತ್ತಡ ನಿವಾರಣೆ,ಜೀವನದಲ್ಲಿ ಯಶಸ್ಸು ಗಳಿಸುವುದು ಹೇಗೆ ಎಂಬುದನ್ನು ಮುಂಬೈ ಐ ಐ ಟಿ ಯ ಹಿರಿಯ ವಿದ್ಯಾರ್ಥಿ,ಇಂಜಿನಿಯರ್,ಪ್ರಾಧ್ಯಾಪಕ ಡಾ..ಎ ಎನ್ ಕುಮಾರ್ ತಿಳಿಸಿದರು.

ಅವರು ಸುಳ್ಯ ನೆಹರು ಮೆಮೋರಿಯಲ್ ಪ ಪೂ ಕಾಲೇಜಿನಲ್ಲಿ ಪ್ರ. ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಮಿಥಾಲಿ ಪಿ ರೈ ವಹಿಸಿದ್ದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಾವಿತ್ರಿ ಕೆ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ ನಿರೂಪಿಸಿ, ವಂದಿಸಿದರು.