ನೆಲ್ಲೂರು ಕೆಮ್ರಾಜೆ : ಸ್ನಾತಕೋತ್ತರ ಪದವಿಯಲ್ಲಿ ಆಶ್ರಿತಾ ಕಿಲಾರ್ಕಜೆಗೆ 1ನೇ ರ್‍ಯಾಂಕ್

0

2023ರಲ್ಲಿ ನಡೆದ ಸ್ನಾತಕೋತ್ತರ ಪದವಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಗೊಂಡಿದ್ದು, ನೆಲ್ಲೂರು ಕೆಮ್ರಾಜೆ ಗ್ರಾಮದ ಆಶ್ರಿತಾ ಕಿಲಾರ್ಕಜೆಯವರಿಗೆ 1ನೇ ರ್‍ಯಾಂಕ್ ಲಭಿಸಿದೆ.

ಅಶ್ರಿತಾರವರು ಎಂ.ಎಸ್ಸಿ. ಪದವಿಯನ್ನು ಮಂಗಳೂರಿನ ಕೋಣಾಜೆ ಯುನಿರ್ವಸಿಟಿಯಲ್ಲಿ ಪೂರೈಸಿ ಪ್ರಸ್ತುತ ಪುತ್ತೂರಿನ ಫೀಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.


ಇವರು ಬಿಎಸ್ಸಿ ಪದವಿಯನ್ನು ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಪೂರೈಸಿದ ಇವರಿಗೆ 8ನೇ ರ್‍ಯಾಂಕ್ ಲಭಿಸಿತ್ತು.


ಪ್ರೌಢಶಿಕ್ಷಣವನ್ನು ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಮತ್ತು ಪ್ರಾಥಮಿಕ ಶಿಕ್ಷಣವನ್ನು ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೊಳ್ಳಾಜೆ ಯಲ್ಲಿ ಪೂರೈಸಿದ್ದಾರೆ.

ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ಕಿಲಾರ್ಕಜೆ ಮಹಾಲಿಂಗೇಶ್ವರ ಭಟ್ ಮತ್ತು ಸರಸ್ವತಿ ದಂಪತಿಗಳ ಪುತ್ರಿ.