ಸುಳ್ಯ ನಗರ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ,ದುರ್ಗಾವಾಹಿನಿಯ ನೂತನ ಸಮಿತಿ ರಚನೆ

0

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ನಗರ ಇದರ ಮಾತೃಶಕ್ತಿ,ದುರ್ಗಾವಾಹಿನಿಯ ನೂತನ ಸಮಿತಿ ಜೂ.6 ರಂದು ರಚನೆಯಾಯಿತು.
ಮಾತೃಶಕ್ತಿಯ ಸಂಚಾಲಕಿಯಾಗಿ ಲತಾ.ಯಂ ರೈ,ಸಹ ಸಂಚಾಲಕಿಯಾಗಿ ಸುಜಾತ ಕುರುಂಜಿ ಹಾಗೂ ಹರಿಣಾಕ್ಷಿ ರೈ ಮೇನಾಲ.
ದುರ್ಗಾ ವಾಹಿನಿ ಸಂಚಾಲಕಿಯಾಗಿ ಪ್ರೀತಿಕಾ ಚೆಮ್ನೂರು ,ಸಹ ಸಂಚಾಲಕಿ ಯಾಗಿ ಚಂದ್ರಿಕಾ ಹೋದ್ದೇಟಿ ಹಾಗೂ ಗೀತಾಶ್ರಿ ಕಾಯರ್ತೋಡಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿಯಾಗಿರುವ ನವೀನ್ ನೆರಿಯ, ವಿಶ್ವ ಹಿಂದೂ ಪರಿಷತ್ ಸುಳ್ಯ ನಗರ ಅಧ್ಯಕ್ಷರಾದ ಉಪೇಂದ್ರ ನಾಯಕ್ ಕಾಯರ್ತೋಡಿ, ಉಪಾಧ್ಯಕ್ಷರು ಮನೋಜ್ ಕುಮಾರ್, ಕಾರ್ಯದರ್ಶಿ ದೇವಿ ಪ್ರಸಾದ್ ಅತ್ಯಾಡಿ, ಬಜರಂಗದಳ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ ಬಜರಂಗದಳ ಸುಳ್ಯ ನಗರದ ಎಲ್ಲ ಕಾರ್ಯಕರ್ತರು ಹಾಗೂ ಮಾತೃಶಕ್ತಿ ದುರ್ಗವಾಹಿನಿಯ ಎಲ್ಲಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.